- Advertisement -
- Advertisement -
ಉಪ್ಪಿನಂಗಡಿ: ಲಾಡ್ಜ್ ಒಂದರಲ್ಲಿ ರೂ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ.
ವಿಟ್ಲ ಮಾಡ್ನೂರು ನಿವಾಸಿ ಮಹಮ್ಮದ್ ಶರೀಫ್(37) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಬೆಳಿಗ್ಗೆ 11:30 ಕ್ಕೆ ರೂಂ ಪಡೆದಿದ್ದರು. ಜ.26 ರಂದು ಮಧ್ಯಾಹ್ನ ತನಕ ರೂಮ್ ಖಾಲಿ ಮಾಡದೇ ಇರುವ ಕಾರಣ ಹೋಟೆಲ್ ಮ್ಯಾನೇಜರ್ ಈ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ರೂಮ್ ಬಾಗಿಲು ತೆರೆದು ನೋಡಿದಾಗ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
- Advertisement -