Saturday, May 18, 2024
Homeಕರಾವಳಿಉಡುಪಿಉಡುಪಿ: ಯಕ್ಷಿಣಿ ವಿದ್ಯೆಯ ಮೂಲಕ ಸಂಕಷ್ಟ ಪರಿಹರಿಸೋದಾಗಿ ಹೇಳಿ ಮಹಿಳೆಗೆ ವಂಚನೆ

ಉಡುಪಿ: ಯಕ್ಷಿಣಿ ವಿದ್ಯೆಯ ಮೂಲಕ ಸಂಕಷ್ಟ ಪರಿಹರಿಸೋದಾಗಿ ಹೇಳಿ ಮಹಿಳೆಗೆ ವಂಚನೆ

spot_img
- Advertisement -
- Advertisement -

ಡುಪಿ: ಯಕ್ಷಿಣಿ ವಿದ್ಯೆಯ ಮೂಲಕ ಸಂಕಷ್ಟ ಪರಿಹರಿಸೋದಾಗಿ ಹೇಳಿ ಮಹಿಳೆಯಿಂದ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ನಕಲಿ ಜ್ಯೋತಿಷಿ ಪರಾರಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ಪ್ರತಿಭಾ ಅವರಿಗೆ ಆರೋಪಿ ಪ್ರವೀಣ್‌ ತಂತ್ರಿ ಎಂಬಾತ 5-6 ತಿಂಗಳ ಹಿಂದೆ ಪರಿಚಯವಾಗಿದ್ದ.ಆಕೆಯ ಸಮಸ್ಯೆಗಳನ್ನು ಯಕ್ಷಿಣಿ ವಿದ್ಯೆಯ ಮುಖಾಂತರ ಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಹಂತ-ಹಂತವಾಗಿ ಒಂದು ಲಕ್ಷ ರೂ. ಪಡೆದುಕೊಂಡಿದ್ದಾನೆ.

ಇದಾದ ಬಳಿಕ ಪ್ರತಿಭಾ ಮತ್ತು ಆಕೆಯ ಮಕ್ಕಳು ಹಾಕಿಕೊಳ್ಳುವ ಆಭರಣಗಳನ್ನು ಪೂಜೆ ಮಾಡಿಸಬೇಕೆಂದು ಹೇಳಿ ಮೇ 24ರಂದು ಕಾಸರಗೋಡು ಜಿಲ್ಲೆಯ ದೇವಸ್ಥಾನವೆಂದರಲ್ಲಿ ಸುಮಾರು 20 ಲ.ರೂ. ಮೌಲ್ಯದ ಒಟ್ಟು 340 ಗ್ರಾಂ ತೂಕದ ಚಿನ್ನಾಭರಣಗಳನ್ನು ಮಹಿಳೆಯಿಂದ ಪಡೆದು ಅವುಗಳನ್ನು ವಾಪಸು ಕೊಡದೆ ನಂಬಿಕೆದ್ರೋಹ ಎಸಗಿ ಮೋಸ ಮಾಡಿದ್ದಾನೆ.ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!