- Advertisement -
- Advertisement -
ಬೆಂಗಳೂರು: ಕ್ರಿಕೆಟ್ ವಿಚಾರವಾಗಿ ಜಗಳವಾಗಿ ಅಪ್ರಾಪ್ತ ಬಾಲಕನಿಗೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿಟ್ಲದ ಕೊಳ್ನಾಡಿನಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮದ ಕುಲ್ಯಾರು ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಶಫೀಕ್ (17) ಹಲ್ಲೆಗೊಳಗಾದ ಬಾಲಕ. ಕಬೀರ್ ಹಲ್ಲೆ ಮಾಡಿದ ಯುವಕ. ಸದ್ಯ ಗಾಯಾಳು ಶಫೀಕ್ ನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಶಫೀಕ್ ತಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
- Advertisement -