Friday, April 26, 2024
Homeಕರಾವಳಿಮಂಗಳೂರು; ಪಟಾಕಿ ಅಂಗಡಿ ಮಾಲೀಕನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ; ಬೆಳ್ತಂಗಡಿಯ ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು; ಪಟಾಕಿ ಅಂಗಡಿ ಮಾಲೀಕನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ; ಬೆಳ್ತಂಗಡಿಯ ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಮಂಗಳೂರು: ಪಟಾಕಿ ಅಂಗಡಿ ಮಾಲೀಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನಿವಾಸಿ ದಿನೇಶ್ ಶೆಟ್ಟಿ (55) ಎಂಬಾತನನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂದರು ಠಾಣಾ ವ್ಯಾಪ್ತಿಯ ಪಟಾಕಿ ಅಂಗಡಿಯೊಂದರ ಮಾಲೀಕ ಮುರಳೀಧರ ಪೈಗೆ ಆರೋಪಿ ದಿನೇಶ್ ಶೆಟ್ಟಿ 5 ಲಕ್ಷ ರೂ.ಮೌಲ್ಯದ ಪಟಾಕಿ ಬೇಕಾಗಿದ್ದು, ಅದಕ್ಕಾಗಿ ನಗರದ ಹೋಟೆಲ್‌ಗೆ ಬರಬೇಕೆಂದು ಹೇಳಿದ್ದ. ಆದರೆ ಅದಕ್ಕೆ ಉದ್ಯಮಿಯು ಒಪ್ಪದಿದ್ದಾಗ ಮರುದಿನ ದಿನೇಶ್ ಶೆಟ್ಟಿ ಮತ್ತಿತರ 4 ಮಂದಿ ಅಂಗಡಿಗೆ ನುಗ್ಗಿ 5 ಲಕ್ಷ ರೂ. ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಅಲ್ಲದೆ ಉದ್ಯಮಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ದೂರಲಾಗಿತ್ತು.

ಆರೋಪಿ ದಿನೇಶ್ ಶೆಟ್ಟಿ ಈ ಹಿಂದೆ ಭೂಗತ ಪಾತಕಿ ರವಿಪೂಜಾರಿಯ ಸಹಚರನಾಗಿದ್ದು, ಕರಾವಳಿಯಲ್ಲಿ ಕೊಲೆ, ಕೊಲೆ ಬೆದರಿಕೆ ಸಹಿತ ಹಲವು ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!