- Advertisement -
- Advertisement -
ಮಂಗಳೂರು: ಮಳಲಿ ಮಸೀದಿ ವಿವಾದ ವಿಚಾರವಾಗಿ ಮಂಗಳೂರು ಕೋರ್ಟ್ ನಲ್ಲಿ ನಡೆಯುತ್ತಿದ್ದ ವಿಚಾರಣೆ ಜೂನ್ 9ಕ್ಕೆ ಮುಂದೂಡಲ್ಪಟ್ಟಿದೆ.
ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಧ್ಯಾಹ್ನದ ಬಳಿಕ ವಿಚಾರಣೆ ಆರಂಭವಾಗಿ ಜೂನ್ 9 ಕ್ಕೆ ಮುಂದೂಡಿಕೆಯಾಗಿದೆ.
ಮಳಲಿ ಮಸೀದಿ ಪರ ವಕೀಲ ಎಂ.ಪಿ. ಶೆಣೈ ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿದ್ದು, ಜೂನ್ 9 ರಂದು ವಿಶ್ವ ಹಿಂದೂ ಪರ ವಕೀಲರ ವಾದ ಮಂಡನೆಗೆ ಸೂಚಿಸಿದೆ.
ಮಸೀದಿ ಸರ್ವೆಗೆ ಕೋರ್ಟ್ ಕಮಿಷನರ್ ನೇಮಕಕ್ಕೆ ವಿಶ್ವ ಹಿಂದೂ ಪರಿಷತ್ ಅರ್ಜಿ ಸಲ್ಲಿಸಿದ್ದು, ವಿಹೆಚ್ ಪಿ ಅರ್ಜಿ ಪುರಸ್ಕರಿಸದಂತೆ ಮಳಲಿ ಮಸೀದಿ ಆಡಳಿತ ಅರ್ಜಿ ಸಲ್ಲಿಸಿತ್ತು.
- Advertisement -