Sunday, April 28, 2024
Homeಕರಾವಳಿಮಾ. 26ರಿಂದ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಟೆಕ್ ಯುವ’ ಸಾಂಸ್ಕೃತಿಕ, ಕ್ರೀಡಾ ಹಬ್ಬ

ಮಾ. 26ರಿಂದ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಟೆಕ್ ಯುವ’ ಸಾಂಸ್ಕೃತಿಕ, ಕ್ರೀಡಾ ಹಬ್ಬ

spot_img
- Advertisement -
- Advertisement -

ಮಂಗಳೂರು: ಇದೇ ಮಾ. 26 ಮತ್ತು 27ರಂದು ಮುಕ್ಕದಲ್ಲಿರುವ ಶ್ರೀನಿವಾಸ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆ ರಾಷ್ಟ್ರಮಟ್ಟದ ಸಾಂಸ್ಕೃತಿಕ, ಕ್ರೀಡಾ ಮತ್ತು ತಾಂತ್ರಿಕ ಹಬ್ಬ ‘ಟೆಕ್ ಯುವ’ ಅನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ.

ಸಂಸ್ಥೆಯ ಡೀನ್ ಥಾಮಸ್ ಪಿಂಟೊ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕ, ಗೋವಾ ಮತ್ತು ತಮಿಳುನಾಡಿನ 40 ಎಂಜಿನಿಯರಿಂಗ್ ಕಾಲೇಜುಗಳಿಂದ 3500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಎಥ್ನೊಟೆಕ್ ಅಕಾಡೆಮಿಕ್ ಸೊಲ್ಯೂಷನ್ಸ್‌ನ ಸಿಇಒ ಕಿರಣ್ ಕೆ.ರಾಜಣ್ಣ, ಮಂಗಳೂರಿನ ನೋವಿಗೊ ಸೊಲ್ಯೂಷನ್ಸ್‌ನ ಸಿಇಒ ಪ್ರವೀಣ ಕಲ್ಭಾವಿ ಪಾಲ್ಗೊಳ್ಳುವರು,’ ಎಂದು ಅವರು ತಿಳಿಸಿದರು.

ಟೆಕ್ ಯುವ ಸಂಚಾಲಕ ಶ್ರೀನಾಥ್ ರಾವ್ ಮಾತನಾಡಿ ಕೃತಕ ಬುದ್ದಿಮತ್ತೆ (ಎಐ), ಬೈನಲ್ ಬ್ಯಾಟಲ್‌, ತಾಂತ್ರಿಕ ಮಾತುಕತೆ ಮುಂತಾದ ಬಗೆಬಗೆಯ ಸ್ಪರ್ಧೆಗಳು ಮೊದಲ ದಿನ ನಡೆಯಲಿದ್ದು ಸಾಂಸ್ಕೃತಿಕ ಚಟುವಟಿಕೆ ಎರಡನೇ ದಿನ ನಡೆಯಲಿದೆ. ಎರಡೂ ದಿನ ಕ್ರೀಡಾ ಸ್ಪರ್ಧೆಗಳು ಇರುತ್ತವೆ ಎಂದರು.

28ರಂದು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಮಾತ್ರ ‘ಕಲಾಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದ್ದು ಭರತನಾಟ್ಯ ಕಲಾವಿದ ಶ್ರೀಧರ್ ಹೊಳ್ಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಎ.ರಾಘವೇಂದ್ರ ರಾವ್‌ ಅಧ್ಯಕ್ಷತೆ ವಹಿಸುವರು ಎಂದು ಅವರು ವಿವರಿಸಿದರು.

- Advertisement -
spot_img

Latest News

error: Content is protected !!