Monday, May 6, 2024
Homeತಾಜಾ ಸುದ್ದಿಹಳೆಯ ಪ್ರೇಮ ಬಾಂಧವ್ಯದಿಂದ ಹೊರಬರಲಾರದೆ ಅತ್ಮಹತ್ಯೆಗೆ ಶರಣಾದ ವಿವಾಹಿತರು- ಸರಕಾರೀ ಉದ್ಯೋಗಿಗಳಿಬ್ಬರ ಪ್ರೇಮ ಪ್ರಕರಣ ಸಾವಿನಲ್ಲಿ...

ಹಳೆಯ ಪ್ರೇಮ ಬಾಂಧವ್ಯದಿಂದ ಹೊರಬರಲಾರದೆ ಅತ್ಮಹತ್ಯೆಗೆ ಶರಣಾದ ವಿವಾಹಿತರು- ಸರಕಾರೀ ಉದ್ಯೋಗಿಗಳಿಬ್ಬರ ಪ್ರೇಮ ಪ್ರಕರಣ ಸಾವಿನಲ್ಲಿ ಅಂತ್ಯ!..

spot_img
- Advertisement -
- Advertisement -

ನೆಲ್ಲೂರು: ಇಲ್ಲಿನ ಪ್ರೇಮಿಗಳಿಬ್ಬರು ಖಾಸಗಿ ಲಾಡ್ಜ್​ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದುರ್ದೈವಿಗಳನ್ನು ಹರೀಶ್​ ಮತ್ತು ಲಾವಣ್ಯ ಎಂದು ಗುರುತಿಸಲಾಗಿದೆ.ಯುವಕ ಚಿಟ್ಟಮರ್​ ಮಂಡಲದ ನಿವಾಸಿ. ಮೆಟ್ಟು ಗ್ರಾಮ ಸಚಿವಾಲಯದಲ್ಲಿ ಸಹಾಯಕ ಇಂಜಿನಿಯರ್​ ಆಗಿದ್ದರು. ನಾಯ್ಡುಪೇಟೆ ಮೂಲದ ಯುವತಿ ಅದೇ ಸಚಿವಾಲಯದಲ್ಲಿ ಗ್ರಾಮ ಕಂದಾಯ ಅಧಿಕಾರಿಯಾಗಿದ್ದರು.ಅಲ್ಲದೆ ಇಬ್ಬರು ಗ್ರಾಮ ಸಚಿವಾಲಯದ ನೌಕರರಾಗಿ ಕೆಲಸ ಮಾಡುತ್ತಿದ್ದರು.

ಹರೀಶ್​ ಇತ್ತೀಚೆಗೆ ತಮ್ಮ ಸಂಬಂಧಿಕರನ್ನೇ ಮದುವೆಯಾಗಿದ್ದರು. ಲಾವಣ್ಯ ಸಹ ಸ್ಯಾದಪುರಂ ಮಂಡಲದ ಮತ್ತೊಂದು ಗ್ರಾಮ ಸಚಿವಾಲಯದ ಉದ್ಯೋಗಿಯನ್ನು ಮದುವೆಯಾಗಿದ್ದಳು. ಆದರೆ ಪ್ರೇಮ ಸಂಭಂದದಿಂದ ಹೊರಬರಲಾಗದೆ,ಮನೆಯವರ ಒತ್ತಾಯದಿಂದ ಬೇಸರಗೊಂಡಿದ್ದ ಲಾವಣ್ಯ ಮತ್ತು ಹರೀಶ್​, ನೆಲ್ಲೂರಿನ ಹೊರವಲಯದಲ್ಲಿರುವ ಪದರುಪಲ್ಲಿಯಲ್ಲಿ ಖಾಸಗಿ ಲಾಡ್ಜ್​ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!