Friday, June 27, 2025
Homeಇತರಪ್ರೀತಿ ನಿರಾಕರಿಸಿದ ವೈದ್ಯೆ, ಕೊಲೆಗಡುಕನಾದ ವೈದ್ಯಾಧಿಕಾರಿ

ಪ್ರೀತಿ ನಿರಾಕರಿಸಿದ ವೈದ್ಯೆ, ಕೊಲೆಗಡುಕನಾದ ವೈದ್ಯಾಧಿಕಾರಿ

spot_img
- Advertisement -
- Advertisement -

ನವದೆಹಲಿ: ಆಗ್ರಾ ಮೂಲದ ವೈದ್ಯೆಯೊಬ್ಬಳನ್ನು ವೈದ್ಯಾಧಿಕಾರಿಯೊಬ್ಬ ಕತ್ತುಹಿಸುಕಿ, ಇರಿದು ಕೊಲೆಗೈದ ಘಟನೆ ನಡೆದಿದೆ. ಆಕೆ ನಾಪತ್ತೆಯಾದ ಕೆಲ ಗಂಟೆಗಳ ನಂತರ ಆಕೆಯ ಶವ ನಗರದ ಬಮ್ರೌಲಿ ಕತಾರಾ ಪ್ರದೇಶದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದೆ. ಆಕೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ಮೃತ ವೈದ್ಯೆ ಮೊರಾದಾಬಾದ್​​ನ ಖಾಸಗಿ ಕಾಲೇಜಿನಿಂದ ವೈದ್ಯಕೀಯ ಪದವಿ ಪೂರೈಸಿ ಎಸ್ ಎನ್ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ವಿಭಾಗದಲ್ಲಿ ವೈದ್ಯೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಕುಟುಂಬ ಸದಸ್ಯರು ಬುಧವಾರ ಬೆಳಿಗ್ಗೆ ಆಗ್ರಾದ ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿದ್ದರು.

ಒರೈ ಜಲಾನ್ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಯೊಬ್ಬ ಕಿರುಕುಳ ನೀಡುತ್ತಿದ್ದು ಕೊಲೆ ಬೆದರಿಕೆ ಹಾಕಿದ್ದರೆಂದು ಎಂದು ಆಕೆಯ ತಂದೆ ಮತ್ತು ಸಹೋದರ ಆರೋಪಿಸಿದ್ದಾರೆ.

ಆಗ್ರಾ ಪೊಲೀಸರು ವೈದ್ಯಾಧಿಕಾರಿ ಡಾ.ವಿವೇಕ್ ತಿವಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ತಿವಾರಿ ಈ ಅಪರಾಧವನ್ನು ಒಪ್ಪಿಕೊಂಡಿದ್ದು. ಅವರ ಪ್ರೇಮ ವೈಫಲ್ಯದಿಂದಾಗಿ ವೈದ್ಯೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆತ ಮೊದಲು ವೈದ್ಯೆಯ ಕತ್ತು ಹಿಸುಕಿ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಲು ಕಾರಿನಲ್ಲಿ ಇರಿದಿದ್ದಾನೆ. ಮೃತಳ ತಲೆ ಮತ್ತು ಕುತ್ತಿಗೆಗೆ ಗಾಯದ ಗುರುತುಗಳಿವೆ ಎಂದು ಆಗ್ರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಬ್ಲು ಕುಮಾರ್ ಹೇಳಿದ್ದಾರೆ. ಮರಣೋತ್ತರ ವರದಿಯಲ್ಲಿ ಮಹಿಳೆ ಸಾಯುವ ಮುನ್ನ ಜೀವ ಉಳಿಸಲು ಹೆಣಗಾಡಿದ್ದಾಳೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!