- Advertisement -
- Advertisement -
ಸೋಮೇಶ್ವರ: ಸಮುದ್ರದಲ್ಲಿ ಮುಳುಗುವ ಭೀತಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಲು ಯತ್ನಿಸಿದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಅವರು ಪ್ರಾಣ ಉಳಿಸಿದ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಸೋಮೇಶ್ವರ ಬೀಚ್ನಲ್ಲಿ ಈ ಘಟನೆ ನಡೆದಿದೆ.
ಮುನ್ನೂರು ಗ್ರಾಮದ ಉಳಿಯ ನಿವಾಸಿ ಲಾಯ್ಡ್ ಡಿಸೋಜಾ (28) ಎಂಬಾತನೇ ಮಹಿಳೆಯನ್ನು ರಕ್ಷಿಸಲು ಯತ್ನಿಸಿ ಮೃತಪಟ್ಟ ವ್ಯಕ್ತಿ. ಪ್ರಾಣಾಪಾಯದಿಂದ ಪಾರಾದ ಕೋಟೆಕಾರ್ನ ಪನೀರು ಮೂಲದ ಆಶಿತಾ ಫೆರ್ರಾವ್ (22) ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -