ಬೆಳ್ತಂಂಗಡಿ ತನಗೆ ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ ಬಂದಿದೆ ಎಂದು ಬೆಳ್ತಂಗಡಿಯ ರಾಮಸೇನಾ ಕಾರ್ಯಕರ್ತರೊಬ್ಬರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿಯ ಹುಣ್ಸಿಕಟ್ಟೆ ನಿವಾಸಿ ಆಗಿರುವ ಅಭಿಷೇಕ್ ಎಂಬವರು ನನಗೆ ಓಡಿಲ್ನಾಳ ಗ್ರಾ.ಪಂ. ಸದಸ್ಯ ನಿತೇಶ್ ಶೆಟ್ಟಿ ಹಾಗೂ ಬೆಳ್ತಂಗಡಿ ನಗರ ಪಂಚಾಯತ್ ಸದಸ್ಯ ಶರತ್ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ.
ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಮ್ ಸೇನಾದ ದಕ್ಷಿಣಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ಲೋಕೇಶ್ ರಾವ್ ಅವರು ಅಲ್ಪಸಂಖ್ಯಾತರ ಓಲೈಕೆಗೆ ಇಳಿದಿರುವ ಬೆಳ್ತಂಗಡಿಯ ಬಿಜೆಪಿ ಪಕ್ಷದ ಕೆಲ ತಳ ಮಟ್ಟದ ಮುಖಂಡರು ತಮ್ಮನ್ನು ತಾವು ಜಾತ್ಯತೀತ ಪಕ್ಷದವರೆಂದು ಬಿಂಬಿಸುವ ಭರದಲ್ಲಿ ಹಿಂದುತ್ವದ ನಿಂದನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಹಿಂದೂ ಸಂಘಟನೆಯ ಮುಖಂಡರಾದ ಅಭಿಷೇಕ್ ಪೂಜಾರಿ (ದಕ್ಷಿಣ ಕನ್ನಡ ಜಿಲ್ಲಾ ಸಹವಕ್ತಾರರು)ಯವರಿಗೆ ಬೆದರಿಕೆ ಹಾಕಿರುವುದನ್ನು ಹಾಗೂ ಹಿಂದೂ ಸಂಘಟನೆಯ ಕೆಲಸಗಳಿಗೆ ಅಡ್ಡಿಪಡಿಸಿರುವದನ್ನು ರಾಮ್ ಸೇನಾ ಸಂಘಟನೆಯ ಖಂಡಿಸುತ್ತದೆ, ಈ ಮೂಲಕ ನಿಮ್ಮ ಹಿಂದುತ್ವ ಚುನಾವಣೆಗೆ ಮಾತ್ರ ಸೀಮಿತವಾದ ಹಿಂದುತ್ವ ಎಂದು ಸಾಬೀತಾದಂತಾಗಿದೆ.
ಹಿಂದುತ್ವದ ಹೆಸರೇಳಿ ಗೆದ್ದ ಬಿಜೆಪಿಯ ನಗರಪಂಚಾಯತ್ 3ನೇ ವಾರ್ಡಿನ ಸದಸ್ಯ ಶರತ್ ಶೆಟ್ಟಿ ಹಾಗೂ ಓಡಿಲ್ನಾಳ ಗ್ರಾಮಪಂಚಾಯತ್ ಸದಸ್ಯ ನಿತೇಶ್ ಶೆಟ್ಟಿ ಎಂಬ ಇಬ್ಬರು ಹಿಂದೂ ಸಂಘಟನೆಯನ್ನು ಗುರಿಯಾಗಿಸಿ ದ್ವೇಷ ಕಾರುವುದು ಎಷ್ಟು ಸರಿ. ಇಂತಹ ಕ್ರಿಮಿಗಳ ಮೇಲೆ ಪೋಲೀಸ್ ಇಲಾಖೆ ಆದಷ್ಟು ಬೇಗ ಕ್ರಮವಹಿಸಬೇಕು ಇಲ್ಲದೇ ಹೋದಲ್ಲಿ ರಾಮ್ ಸೇನಾ ಸಂಘಟನೆಯು ತನ್ನದೇ ರೀತಿಯಲ್ಲಿ ಉತ್ತರವನ್ನು ನೀಡಬೇಕಾಗಿ ಬರಬಹುದು ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದಿದ್ದಾರೆ.