ವಿಟ್ಲ: ಮೋರಿ ಕಾಮಗಾರಿಗೆ ಆಕ್ಷೇಪಿಸಿದ್ದಕ್ಕೆ ತಂದೆ, ಮಗಳಿಗೆ ಕೊಲೆ ಬೆದರಿಕೆ ಹಾಕಿ ಕಟ್ಟಿಗೆ ಇರಿಸಿದ್ದ ಕೊಟ್ಟಿಗೆಗೆ ಬೆಂಕಿ ಹಾಕಿದ ಘಟನೆ ವಿಟ್ಲದ ಕರೋಪಾಡಿ ಗ್ರಾಮದ ಕೆದುಮೂಲೆ ಎಂಬಲ್ಲಿ ನಡೆದಿದೆ.
ನೆರೆಮನೆಯವರಾದ ರಝಾಕ್ ಹಾಗೂ ಮೂಸೆ ಕಲಿಂ ಅವರು ಮಹಮ್ಮದ್ ಅವರ ಮನೆ ಮುಂದೆ ಮೋರಿ ಕಾಮಗಾರಿ ನಡೆಸುತ್ತಿದ್ದುದನ್ನು ಮಹಮ್ಮದ್ ಆಕ್ಷೇಪಿಸಿದ್ದರು. ಸಿಟ್ಟಿಗೆದ್ದ ರಝಾಕ್ ಮತ್ತು ಮೂಸೆ ಕಲಿಂ ಅವರಿಬ್ಬರು ಮಹಮ್ಮದ್ ಅವರನ್ನು ದೂಡಿ ಹಾಕಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಕಿಟಕಿಯನ್ನು ಒಡೆದು, ಅವಾಚ್ಯ ಶಬ್ದಗಳಿಂದ ಬೈದು, ಮನೆಗೆ ತಾಗಿಕೊಂಡಿರುವ ಕಟ್ಟಿಗೆ ಸಂಗ್ರಹಿಸುವ ಕೊಟ್ಟಿಗೆಗೆ ಬೆಂಕಿ ಹಚ್ಚಿ, ಕೊಲ್ಲುವ ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ ಎಂದು ಮಹಮ್ಮದ್ ಅವರ ಪುತ್ರಿ ಝೋರಾ ಅವರು ದೂರು ನೀಡಿದ್ದಾರೆ.
ಅಲ್ಲದೆ ಅವರ ಕಟ್ಟಿಗೆ ಸಂಗ್ರಹಿಸುವ ಕೊಠಡಿ ಸಂಪೂರ್ಣ ಸುಟ್ಟು ಹೋಗಿದ್ದಲ್ಲದೆ ಮನೆಯ ಕಿಟಕಿಯ ಗಾಜು ಪುಡಿಯಾಗಿ ಒಟ್ಟು 25,000/- ರೂ ನಷ್ಟವಾಗಿದೆ ಎಂದೂ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.