- Advertisement -
- Advertisement -
ಬೆಳ್ತಂಗಡಿ : ಕೆಲವು ದಿನಗಳ ಹಿಂದೆ ತಣ್ಣಿರುಪಂತ ಗ್ರಾಮದ ಅಳಕ್ಕೆ ಎಂಬಲ್ಲಿ ಮನೆಯ ವರಾಂಡದಿಂದಲೇ ಹೊತ್ತೊಯ್ದ ಬೆನ್ನಲ್ಲೇ ಇದೀಗ ಮಚ್ಚಿನ ಗ್ರಾಮದ ಪುಂಚಪಾದೆಯ ಸುತ್ತಮುತ್ತ ಈ ಚಿರತೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾತ್ರಿ ಹಾಗೂ ಬೆಳ್ಳಂ ಬೆಳಗ್ಗೆ ಚಿರತೆ ಕೂಗುವ ಧ್ವನಿಯು ಇಲ್ಲಿಯ ಸುತ್ತಮುತ್ತಲಿನ ಮನೆಯವರಿಗೆ ಕೇಳುತ್ತಿದ್ದು, ಈ ವೇಳೆ ಮನೆಯಲ್ಲಿದ್ದ, ನಾಯಿ, ಹಸುಗಳು ಗಾಬರಿಗೊಳ್ಳುತ್ತಿದೆ. ಪುಂಚಪಾದೆಯ ಸುತ್ತಮುತ್ತ ಕಾಡು ಪ್ರದೇಶವಾಗಿದ್ದು, ಪ್ರತೀ ವರ್ಷ ಈ ಕಾಡಿಗೆ ಹುಲಿ ಅಥವಾ ಚಿರತೆ ಬರುತ್ತಿದ್ದು, ಸಧ್ಯ ಚಿರತೆಯ ಧ್ವನಿ ಕೇಳಿದ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಗಮನ ಹಿರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
- Advertisement -