- Advertisement -
- Advertisement -
ರಾಮನಗರ : ಬಿಡದಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಕಟೀಲ್ ದೇಶದಲ್ಲಿ ಕೊರೊನಾ ಬಂದಾಗ ಪ್ರಧಾನಿ ಮೋದಿಯವರ ಪ್ರೇರಣೆಯಿಂದ ಲಸಿಕೆ ಕಂಡು ಹಿಡಿಯಲಾಗಿತ್ತು. ನಂತರ ಪ್ರಧಾನಿ ಮೋದಿ ಲಸಿಕೆ ಪಡೆದರು. ಸಿದ್ದರಾಮಯ್ಯ ಅವರೆಲ್ಲಾ ಲಸಿಕೆ ಪಡೆದ್ರೆ ಮಕ್ಕಳಾಗಲ್ಲ ಎಂದು ಹೇಳಿಕೊಂಡು ತಿರುಗಿದ್ರು, ನಂತರ ರಾತ್ರಿ ಕದ್ದು ಹೋಗಿ ಲಸಿಕೆ ಹಾಕಿಸಿಕೊಂಡರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ಲೀಗಲ್ ನೋಟಿಸ್ ನೀಡಿದೆ
.ಕೆಪಿಸಿಸಿ ಯುವ ಘಟಕದ ಕಾನೂನು ಕೋಶದ ಅಧ್ಯಕ್ಷ ಶತಭಿಷ್ ಶಿವಣ್ಣ ನೋಟಿಸ್ ನೀಡಿದ್ದು, ಕಟೀಲ್ ಹೇಳಿಕೆಯಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಿದೆ. ಕಟೀಲ್ ಕೂಡಲೇ ಈ ಮಾತು ಹಿಂಪಡೆಯಬೇಕು ಹಾಗೂ ಮಾನನಷ್ಟಕ್ಕೆ 1 ಕೋಟಿ ಪರಿಹಾರ ನೀಡಬೇಕು, 15 ದಿನದೊಳಗೆ ಇದಕ್ಕೆ ಉತ್ತರ ನೀಡದೇ ಹೋದ್ರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
- Advertisement -