Saturday, May 18, 2024
Homeಕರಾವಳಿದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿವಿಧ ಭೂಮಾಪಕರ ವರ್ಗಾವಣೆ

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿವಿಧ ಭೂಮಾಪಕರ ವರ್ಗಾವಣೆ

spot_img
- Advertisement -
- Advertisement -

ಮಂಗಳೂರು: ಕಾರ್ಕಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಭೂ ಮಾಪಕ ನಾಗೇಂದ್ರ ಅವರನ್ನು ಸೋಮವಾರಪೇಟೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಕುಂದಾಪುರ ಭೂ‌ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ‌ ಅಧೀಕ್ಷಕ ಸಿ. ಜಗದೀಶ‌ ಅವರನ್ನು ಮೂಡಿಗೆರೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಅಧೀಕ್ಷಕರಾಗಿ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಮಳವಳ್ಳಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಪರ್ಯಾವೇಕ್ಷಕ ದೇವರಾಜು ಎನ್. ಅವರನ್ನು ಬೆಳ್ತಂಗಡಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಉಡುಪಿ ಭೂ ದಾಖಲೆಗಳ ಸಹಾಯಕ ‌ನಿರ್ದೇಶಕರ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಭೂ ಮಾಪಕರಾಗಿದ್ದ ನಾಗಾನಂದ ಜಿ. ನಾಯಕ್ ಅವರನ್ನು ಸಾಗರ ಭೂ ದಾಖಲೆಗಳ ಸಹಾಯಕ ‌ನಿರ್ದೇಶಕರ ಕಚೇರಿಗೆ ವರ್ಗಾಯಿಸಲಾಗಿದೆ. ಬ್ರಹ್ಮಾವರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಭೂಮಾಪಕ ನವೀನ್ ಕೆ.ಎನ್. ಅವರನ್ನು ಕಡೂರು ಭೂ ದಾಖಲೆಗಳ‌ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ ಭೂಮಾಪಕರಾದ ರಮ್ಯ ಯು.ಪಿ. ಅವರನ್ನು ಸುಳ್ಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಖಾಲಿ‌ ಹುದ್ದೆಗೆ ವರ್ಗಾಯಿಸಲಾಗಿದೆ. ಬಂಟ್ವಾಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಭೂ ಮಾಪಕರಾದ ಉಷಾ ಅವರ ಕಾರ್ಕಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆಯನ್ನು ರದ್ದುಪಡಿಸಲಾಗಿದೆ.

ಸಾರ್ವತ್ರಿಕ ವರ್ಗಾವಣೆ ಹಿನ್ನೆಲೆಯಲ್ಲಿ ಒಟ್ಟು 156 ಭೂ ಮಾಪಕರನ್ನು ವರ್ಗಾವಣೆ ‌ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

- Advertisement -
spot_img

Latest News

error: Content is protected !!