- Advertisement -
- Advertisement -
ಬಂಟ್ವಾಳ; ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಕೇರಳದ ಪಾಲಕ್ಕಾಡ್ ನ ಬಿಜು( 45) ಮೃತ ದುರ್ದೈವಿ.
ಇನ್ನುಳಿದಂತೆ ಕಣ್ಣೂರಿನ ಜಾನಿ(44), ಕೊಟ್ಟಾಯಂನ ಬಾಬು(46), ಸಂತೋಷ್ ಅಲ್ಫುಝಾ (46) ಎಂಬವರನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದ ಮೂವರಲ್ಲಿ ಸಂತೋಷ್ ಎಂಬವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಡಿ.ಸಿ ರಾಜೇಂದ್ರ ಕೆ.ವಿ , ಎಸ್ಪಿ ಖುಷಿಕೇಷ್ ಸೋನುವಾಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Advertisement -