- Advertisement -
- Advertisement -
ಪುತ್ತೂರು: ಭಾನುವಾರ ಮಂಗಳೂರು ಹೊರವಲಯದ ಗುರುಪುರದಲ್ಲಿ ಗುಡ್ಡ ಕುಸಿದು, ಇಬ್ಬರು ಮಕ್ಕಳು ಮೃತಪಟ್ಟ ಬೆನ್ನಲ್ಲೇ ಇಂದು ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ ಪರ್ಲಡ್ಕದ ಗೋಳಿಕಟ್ಟೆ ಎಂಬಲ್ಲಿ ಮನೆಯಂಗಳದ ಆವರಣ ಗೋಡೆಯೊಂದು ಕುಸಿದು ಬಿದ್ದು ಮಹಿಳೆಯೊಬ್ಬರು ಮಣ್ಣಿನಡಿಯಲ್ಲಿ ಹೋತು ಹೋಗಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಕೆಎಸ್ಆರ್ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ (49) ಮೃತಪಟ್ಟ ಮಹಿಳೆ.
ಇವರು ಮನೆಯ ಹಿಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಮೇಲ್ಭಾಗದಲ್ಲಿನ ಮನೆಯ ಅವರಣ ಗೋಡೆ ಇವರ ಮೇಲೆ ಬಿದ್ದ ಕಾರಣ ದುರ್ಘಟನೆ ನಡೆದಿದೆ.
- Advertisement -