- Advertisement -
- Advertisement -
ಮಂಗಳೂರು :ತನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತಿದ್ದಂತೆ ಮಹಿಳಾ ಉದ್ಯಮಿಯೊಬ್ಬರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಖ್ಯಾತ ಜವಳಿ ಉದ್ಯಮಿ ಪಿ.ಕೆ.ದೂಜ ಪೂಜಾರಿಯ ಸೊಸೆ, ಭೂಮಿಕಾ ಟೆಕ್ಸ್ಟೈಲ್ನ ಮಾಲಕಿ, ಉದ್ಯಮಿ ಸುಮಾ ಸತೀಶ್ ಆತ್ಮಹತ್ಯೆಗೆ ಶರಣಾದವರು.
ನಿನ್ನೆ ತಮ್ಮ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಮಣ್ಣಗುಡ್ಡ ಅಭಿಮಾನ್ ಮೆನ್ಷನ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಅವರು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -