- Advertisement -
- Advertisement -
ಉಡುಪಿ ; ತೀವ್ರ ಹೊಟ್ಟೆ ನೋವಿನಿಂದ ಬೇಸತ್ತು ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೆಚ್ಚಾಬಾಳು ಎಂಬಲ್ಲಿ ನಡೆದಿದೆ.
ಮೊಳಹಳ್ಳಿ ಗ್ರಾಮದ ಕೆಚ್ಚಾಬಾಳು ನಿವಾಸಿ ಜ್ಯೋತಿ ಶೆಡ್ತಿ (55) ಮೃತ ದುರ್ದೈವಿ. ಜ್ಯೋತಿ ಅವರು ಒಂದು ತಿಂಗಳಿನಿಂದ ವಿಪರೀತ ನಿತ್ರಾಣ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದುರು. ಚಿಕಿತ್ಸೆ ಪಡೆದುಕೊಂಡರು ಗುಣಮುಖರಾಗಿಲ್ಲ ಎನ್ನಲಾಗಿದೆ.
ಇದೇ ಕಾರಣದಿಂದ ಅವರು ಜೀವನದಲ್ಲಿ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -