- Advertisement -
- Advertisement -
ಮಂಗಳೂರು: ಸರಿಯಾದ ರಸ್ತೆ ಇಲ್ಲದಿರುವ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಪರದಾಡಿರುವ ಘಟನೆ ಉಳ್ಳಾಲದ ಹರೇಕಳದಲ್ಲಿ ನಡೆದಿದೆ.

ಉಳ್ಳಾಲದ ಹರೇಕಳ ಮಾಜಿ ಸಚಿವ ಯುಟಿ ಖಾದರ್ ಕ್ಷೇತ್ರವಾಗಿದೆ, ಅಲ್ಲಿನ ವೃದ್ಧರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ರಸ್ತೆಯೇ ಇಲ್ಲದಿರುವ ಕಾರಣದಿಂದ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಕಷ್ಟ ಪಡುವಂತಾಯಿತು. ಹರೇಕಳ ಗ್ರಾಮಸ್ಥರು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿರಲಿಲ್ಲ. ಇದು ಅಲ್ಲಿನ ಗ್ರಾಮಸ್ಥರ ಆಕ್ರೋಷಕ್ಕೆ ಗುರಿಯಾಗಿದೆ.
- Advertisement -