Sunday, June 7, 2026
Homeಕರಾವಳಿಮಂಗಳೂರಿನಲ್ಲಿ ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡಕ್ಕೆ ಸಮ್ಮಾನ

ಮಂಗಳೂರಿನಲ್ಲಿ ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡಕ್ಕೆ ಸಮ್ಮಾನ

- Advertisement -
- Advertisement -

ಮಂಗಳೂರು: ಖ್ಯಾತ ಮುಳುಗು ತಜ್ಞ ಈಶ್ವರ್‌ ಮಲ್ಪೆ ಮತ್ತು ತಂಡದವರು ಶಿರೂರು ದುರಂತ ಸಂದರ್ಭ ಲಾರಿ ಚಾಲಕ ಅರ್ಜುನನ ಮೃತದೇಹವನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ ಹಾಗೂ ಮೃತ ದೇಹವನ್ನು ಅರ್ಜುನನ ಊರು ಕೇರಳದ ಕಲ್ಲಿಕೋಟೆಯ ಕನ್ನಡಿಕ್ಕಲ್‌ಗೆ ಕೊಂಡು ಹೋಗಿ ಆತನ ಕುಟುಂಬಿಕರಿಗೆ ಒಪ್ಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪ್ರಶಂಸೆಯನ್ನು ಪಡೆದುಕೊಂಡಿದ್ದರು. ಈಶ್ವರ್‌ ಮಲ್ಪೆ ಮತ್ತು ತಂಡದವರನ್ನು ಮಂಗಳೂರಿಗೆ ವಾಪಾಸು ಬರುವ ಸಂದರ್ಭದಲ್ಲಿ ನಂತೂರಿನ ಮೊಂಟಿಯಾರಾ ಅಪಾರ್ಟ್‌ಮೆಂಟ್‌ಟಿನ ನಿವಾಸಿಗಳು ಸಮ್ಮಾನಿಸಿದರು.

ಈ ಸಂದರ್ಭದಲ್ಲಿ ನಿತ್ಯಾನಂದ ಶೆಟ್ಟಿ, ಸ್ವರೂಪ ಎನ್‌. ಶೆಟ್ಟಿ, ಪ್ರೇಮ್‌ ಡೇಸಾ, ಮೇರಿ ಲೋಬೋ, ಶ್ರೀನಾಥ್‌ ಅಡ್ಯಂತಾಯ, ಕೇದಾರ್‌ನಾಥ್‌ ಶೆಟ್ಟಿ, ವಿಜಯ ಕುಮಾರ್‌ ಶೆಟ್ಟಿ, ವಿವೇಕ್‌ ಬಾಬು, ಕೃಷ್ಣಾ ರೆಡ್ಡಿ, ಸತೀಶ್‌ ಶೆಟ್ಟಿ, ಡಿ.ಕೆ. ಅಶೋಕ್‌, ಜೇಮ್ಸ್‌ ಪ್ರವೀಣ್‌, ವೀಣಾ ಬೆನೆಡಿಕ್ಟ್ ಕೋಟ್ಯಾನ್‌, ಶಾಂತಲಾ ಗಟ್ಟಿ, ಕ್ರಿಸ್ಟೋಫರ್‌, ಭಾಗೇಶ್ವರಿ ಶೆಟ್ಟಿ, ಕಿರಣ ಜೇಮ್ಸ್‌, ಸೌಮ್ಯಾ ಶೆಟ್ಟಿ, ಪ್ರಿಯಾ ಶೆಟ್ಟಿ, ಸರಸ್ವತಿ ಹೆಗ್ಡೆ, ಮಮತಾ ಶೆಟ್ಟಿ, ಮೀನಾ ಟೆಲ್ಲಿಸ್‌, ನ್ಯಾನ್ಸಿ, ನವೀದುಲ್ಲಾ, ಜ್ಯೋತಿ ಬ್ರಿಟ್ಟೋ, ಮಧುಕರ್‌, ಶ್ರೇಯಸ್‌ ಬ್ರಿಟ್ಟೋ, ಶೈನಾ ಬ್ರಿಟ್ಟೋ, ರೋಶನ್‌, ಹನುಮಂತ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!