Thursday, May 9, 2024
Homeತಾಜಾ ಸುದ್ದಿಪ್ಲೀಸ್ ಮಹಿಳೆಯರಿಗೆ ಬೇಗ ಉಚಿತ ಪ್ರಯಾಣ ಜಾರಿ ಮಾಡಿ ನಮ್ಮನ್ನು ಕಾಪಾಡಿ; ಸಾರಿಗೆ ನೌಕರರಿಂದ ಸಿಎಂ...

ಪ್ಲೀಸ್ ಮಹಿಳೆಯರಿಗೆ ಬೇಗ ಉಚಿತ ಪ್ರಯಾಣ ಜಾರಿ ಮಾಡಿ ನಮ್ಮನ್ನು ಕಾಪಾಡಿ; ಸಾರಿಗೆ ನೌಕರರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ

spot_img
- Advertisement -
- Advertisement -

ಬೆಂಗಳೂರು : ಪ್ಲೀಸ್ ಮಹಿಳೆಯರಿಗೆ ಬೇಗ ಉಚಿತ ಪ್ರಯಾಣ ಜಾರಿ ಮಾಡಿ ನಮ್ಮನ್ನು ಕಾಪಾಡಿ ಎಂದು ಸಾರಿಗೆ ನೌಕರರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ನಿಂದ ಉಚಿತ ಬಸ್ ಪಾಸ್ ಘೋಷಣೆಯಾದ ಹಿನ್ನೆಲೆ ಮಹಿಳೆಯರು ಬಸ್ ನಲ್ಲಿ ಸಿಬ್ಬಂದಿ ಜೊತೆ ಗಲಾಟೆ ಮಾಡುತ್ತಿದ್ದು, ಇದರಿಂದ ಕಿರಿಕಿರಿ ಅನುಭವಿಸುತ್ತಿರುವ ಸಾರಿಗೆ ನೌಕರರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಬಸ್ ನಲ್ಲಿ ಟಿಕೆಟ್ ಮಾಡಿಸದೇ ಮಹಿಳೆಯರು ನಿರ್ವಾಹಕರ ಜೊತೆ ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಸಿಬ್ಬಂದಿಗೆ ತೊಂದರೆ ಕಿರಿಕಿರಿ ಆಗುತ್ತಿದೆ. ಇದಕ್ಕೆ ಶೀಘ್ರ ಪರಿಹಾರ ಕೊಡಿ ಎಂದು ಸಿಎಂ ಸಿದ್ದರಾಮಯ್ಯಗೆ ಸಾರಿಗೆ ಯೂನಿಯನ್ ವತಿಯಿಂದ ಪತ್ರ ಬರೆಯಲಾಗಿದೆ.

ಬಸ್ ನಲ್ಲಿ ಮಹಿಳೆಯರು ಹಣ ನೀಡಲು ನಿರಾಕರಿಸುತ್ತಿದ್ದಾರೆ. ಹಣ ನೀಡುವಂತೆ ಕೇಳಿದ್ರೆ ಗಲಾಟೆ ಮಾಡುತ್ತಾರೆ. ಇದರಿಂದ ನಮ್ಮ ಸಿಬ್ಬಂದಿ ಟಿಕೆಟ್ ಪಡೆಯುವದೇ ಕಷ್ಟವಾಗಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಶೀಘ್ರ ಉಚಿತ ಪ್ರಯಾಣ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. 

- Advertisement -
spot_img

Latest News

error: Content is protected !!