Thursday, April 25, 2024
Homeಕರಾವಳಿಬಂಟ್ವಾಳ; ಟಿಕೆಟ್ ವಿಚಾರಕ್ಕೆ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಕೆಎಸ್ ಆರ್ ಟಿಸಿ ಕಂಡೆಕ್ಟರ್

ಬಂಟ್ವಾಳ; ಟಿಕೆಟ್ ವಿಚಾರಕ್ಕೆ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಕೆಎಸ್ ಆರ್ ಟಿಸಿ ಕಂಡೆಕ್ಟರ್

spot_img
- Advertisement -
- Advertisement -

ಬಂಟ್ವಾಳ; ಟಿಕೆಟ್ ವಿಚಾರಕ್ಕೆ ಮಹಿಳಾ ಪ್ರಯಾಣಿಕರಬ್ಬರ ಜೊತೆ ಕೆಎಸ್ ಆರ್ ಟಿಸಿ ಕಂಡೆಕ್ಟರ್ ಅನುಚಿತವಾಗಿ ವರ್ತಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

 ಪ್ರೀತಂ ಎಂಬ ಮಹಿಳೆ ಮಂಗಳೂರು ಪಂಪ್ ವೆಲ್ ನಿಂದ ಬಿಸಿ ರೋಡ್ ಗೆ ತೆರಳಲು  ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ ಹತ್ತಿದ್ದಾರೆ. ಪ್ರತಿ ದಿನ ಅವರು ಬಸ್ ನಲ್ಲಿ ಪ್ರಯಾಣಿಸುವ ಕಾರಣದಿಂದ ಅವರಿಗೆ  ಟಿಕೆಟ್ ಬೆಲೆ ಕೂಡ ಗೊತ್ತಿತ್ತು . ಮಂಗಳೂರು- ಬಿಸಿರೋಡು 26 ರೂ ಟಿಕೆಟ್ ಗಾಗಿ ಅವರ ಬಳಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ 106 ರೂ ನೀಡಿದ್ದಾರೆ.


ಆದರೆ ಟಿಕೆಟ್ ನೀಡಿದ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದಾಗ ನನ್ನ ಬಳಿ ಚಿಲ್ಲರೆ ಇಲ್ಲ ಹಾಗಾಗಿ ‌ 106 ನೀಡಿದ್ದೇನೆ ಎಂದು ಸೌಮ್ಯವಾಗಿ ತಿಳಿಸಿದ್ದಾರೆ.ಆದರೆ ಮಹಿಳೆಯ ಮಾತಿಗೆ ಬೆಲೆ ಕೊಡದೆ ಚಿಲ್ಲರೆ ಇಲ್ಲದೆ ಯಾಕೆ ಬರುತ್ತೀರಿ ಎಂದು ಇಲ್ಲದ ಸಲ್ಲದ ಅವ್ಯಾಚ್ಚ ಶಬ್ದಗಳಿಂದ ಬೈದು ಮಹಿಳೆಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಸಾಲದು ಎಂಬುದಕ್ಕೆ ಬಸ್ ನಲ್ಲಿರುವ ಸಹ ಪ್ರಯಾಣಿಕರಲ್ಲಿಯೂ ಈ ವಿಚಾರವಾಗಿ ಅನಗತ್ಯ ಮಾತುಗಳ ಮೂಲಕ ಮಹಿಳೆಯನ್ನು ನಿಂದಿಸಿ ಬಳಿಕ ಫರಂಗಿಪೇಟೆಯಲ್ಲಿ ಬಸ್ ನಿಲ್ಲಿಸಿ ಬಲಾತ್ಕಾರವಾಗಿ ಮಹಿಳೆಯನ್ನು ಅಲ್ಲಿರುವ ಪೋಲೀಸ್ ಔಟ್ ಪೋಸ್ಟ್ ಗೆ ಕರೆದುಕೊಂಡು ಹೋಗಿದ್ದಾರೆ.  ಆದರೆ ಅಲ್ಲಿ ಹೋಗಿ ನೋಡಿದಾಗ ಯಾರು ಪೋಲೀಸರು ಇಲ್ಲದ ಕಾರಣ ವಾಪಾಸು ಬಸ್ ಮೂಲಕ ಬಿಸಿರೋಡಿಗೆ ಬಂದಿದ್ದಾರೆ.
ಬಿಸಿರೋಡು ವರೆಗೂ ಚಿಲ್ಲರೆ ಕೊಡದೆ ಸತಾಯಿಸಿದ ಕಂಡೆಕ್ಟರ್ ವಿರುದ್ಧ ಬಳಿಕ ಮಹಿಳೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!