Saturday, May 18, 2024
Homeಕರಾವಳಿಸುಳ್ಯದ ಉಜಿರಡ್ಕದಲ್ಲಿ ಕೊರಗಜ್ಜನ ಪವಾಡ; ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ ಗೋವಾದಲ್ಲಿ ಪತ್ತೆಯಾದ್ದರ ಹಿಂದಿದೆ ಅಜ್ಜನ ಕಾರ್ಣಿಕ

ಸುಳ್ಯದ ಉಜಿರಡ್ಕದಲ್ಲಿ ಕೊರಗಜ್ಜನ ಪವಾಡ; ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ ಗೋವಾದಲ್ಲಿ ಪತ್ತೆಯಾದ್ದರ ಹಿಂದಿದೆ ಅಜ್ಜನ ಕಾರ್ಣಿಕ

spot_img
- Advertisement -
- Advertisement -

ಸುಳ್ಯದಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ಸಾಬೀತಾಗಿದೆ. ಇಲ್ಲಿನ  ನಾಲ್ಕೂರು ಗ್ರಾಮದ ಉಜಿರಡ್ಕದ ಕೊರಗಜ್ಜನ ಸಾನಿಧ್ಯದಲ್ಲಿ ಅಚ್ಚರಿಯೊಂದು ನಡೆದಿದೆ.

ಇತ್ತೀಚೆಗೆ ರಾಜ್ಯದಾದ್ಯಂತ ಬೆಂಗಳೂರಿನ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದ  ಸುದ್ದಿ ಸದ್ದು ಮಾಡಿತ್ತು.  ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಬಾಲಕಿ ಭಾರ್ಗವಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮನೆಯವರು ಬೈದರು ಅನ್ನೋ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಳು. ಬಳಿಕ ಗೋವಾದಲ್ಲಿ ಪತ್ತೆಯಾಗಿದ್ದಳು.  

ಇನ್ನು ಬಾಲಕಿ ನಾಪತ್ತೆಯಾಗುತ್ತಿದ್ದಂತೆ ಹೆತ್ತವರು ಆತಂಕಗೊಂಡಿದ್ದರು . ಈ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಯುವತೇಜಸ್ಸು ಟ್ರಸ್ಟ್ ಇದರ ಕಾರ್ಯಕರ್ತರಾದ ನಿತಿನ್ ಭಟ್ ನೂಚಿಲ ಹಾಗೂ ಸುಹಾಸ್ ನೂಚಿಲ ಅವರ ಮನೆಯವರು  ಅ. 19 ರಂದು ಉಜಿರಡ್ಕ ಸಾನಿಧ್ಯದಲ್ಲಿ ಬಂದು ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿ ಆ ದಿನ ಕಾಣೆಯಾದ ಬಾಲಕಿಯು ಸಂಜೆ ಸೂರ್ಯ ಅಸ್ತಮಿಸುವುದರೊಳಗೆ ಸಿಕ್ಕಿದಲ್ಲಿ 48 ದಿನದ ಒಳಗಡೆ ಕೊರಗಜ್ಜನಿಗೆ ಹರಕೆಯ ರೂಪದಲ್ಲಿ ನರ್ತನ ಸೇವೆ ಕೊಡುವುದಾಗಿ ಪ್ರಾರ್ಥಿಸಿದ್ದರು .

ಕೊರಗಜ್ಜನಲ್ಲಿ ಪ್ರಾರ್ಥಿಸಿದ ದಿನವೇ ಸಂಜೆ ಬಾಲಕಿ ಗೋವಾದಲ್ಲಿ ಪತ್ತೆಯಾಗಿದ್ದು ಕೊರಗಜ್ಜನ ಕಾರ್ಣಿಕ ಸಾಬೀತಾಗಿದೆ. ಇನ್ನು ಕೊರಗಜ್ಜನ ಸಾನಿಧ್ಯಕ್ಕೆ  ಬಾಲಕಿಯೊಂದಿಗೆ  ಆಗಮಿಸಿದ ಕುಟುಂಬ   ಆಡಳಿತ ಮಂಡಳಿಯನ್ನು ಭೇಟಿಯಾಗಿ ಪ್ರಾರ್ಥನೆ ನೆರವೇರಿಸಿದ್ದಾರೆ. ಅಲ್ಲದೇ ಕೊರಗಜ್ಜನ ಪವಾಡಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!