ಬೆಂಗಳೂರು; ಕರಾವಳಿಯಲ್ಲಿ ತನ್ನ ಕಾರ್ಣಿಕದ ಮೂಲಕವೇ ಸಾಕಷ್ಟು ಭಕ್ತರನ್ನು ಹೊಂದಿರುವ ಕೊರಗಜ್ಜ ತನ್ನ ಪವಾಡ ಏನು ಅನ್ನೋದನ್ನು ಬಿಗ್ ಬಾಸ್ ಸೀಸನ್ 11 ನ ಬಿಗ್ ಬಾಸ್ ಮನೆಯಲ್ಲಿ ತೋರಿಸಿದ್ದಾರೆ.
ನವೆಂಬರ್ 13 ಅಂದರೆ ಬುಧವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಹಸಿ ಮಣ್ಣಿನ ರಾಶಿಯಲ್ಲಿ ಆಟ ಆಡಬೇಕಿತ್ತು. ಈ ವೇಳೆ ಚೈತ್ರಾ ಕುಂದಾಪುರ ಅವರ ಚಿನ್ನದ ಉಂಗುರ ಕಳೆದು ಹೋಗಿದೆ. ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಅವರು ಅತ್ತಿದ್ದಾರೆ. ಕೂಡಲೇ ಮನಸ್ಸಿನಲ್ಲಿ ಕೊರಗಜ್ಜನನ್ನು ನೆನಪಿಸಿಕೊಂಡಿದ್ದಾರೆ.
ಅಲ್ಲದೆ ಚೈತ್ರಾ ಕ್ಯಾಮರಾ ಮುಂದೆ ಬಂದು ತುಂಬಾ ಇಂಪಾರ್ಟೆಂಟ್ ಉಂಗುರ, ದಯವಿಟ್ಟು ಹುಡುಕಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಟಾಸ್ಕ್ ಬಳಿಕ ಬಿಗ್ಬಾಸ್ ಉಂಗುರವನ್ನು ಹುಡುಕಿ ಕೊಟ್ಟರು. ಆಗ ಚೈತ್ರಾ ಸ್ವಾಮಿ ಕೊರಗಜ್ಜ ಎಂದು ಕೈಮುಗಿದರು. ಬಿಗ್ಬಾಸ್ ಗೂ ಧನ್ಯವಾದ ಹೇಳಿದ್ದಾರೆ. ಇದೀಗ ಕೊರಗಜ್ಜ ಬಿಗ್ ಬಾಸ್ ಮನೆಯಲ್ಲೂ ಪವಾಡ ಮೆರೆದಿದ್ದು ಅಜ್ಜನ ಭಕ್ತರಲ್ಲಿ ಖುಷಿ ಮೂಡಿಸಿದೆ.