Sunday, May 5, 2024
Homeಕರಾವಳಿಕೊಕ್ಕಡದಲ್ಲಿ ಲವ್ ಜಿಹಾದ್ ಆರೋಪದ ಮೇಲೆ ಇಂದು ಮುಸ್ಲಿಂ ಯುವಕನೊಬ್ಬನ ಮೇಲೆ ಹಲ್ಲೆ

ಕೊಕ್ಕಡದಲ್ಲಿ ಲವ್ ಜಿಹಾದ್ ಆರೋಪದ ಮೇಲೆ ಇಂದು ಮುಸ್ಲಿಂ ಯುವಕನೊಬ್ಬನ ಮೇಲೆ ಹಲ್ಲೆ

spot_img
- Advertisement -
- Advertisement -

ಬೆಳ್ತಂಗಡಿ: ಬೆಂಗಳೂರು ಮೂಲದ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಮುಸ್ಲಿಂ ಆಟೋ ಚಾಲಕ ರಿಜಿಸ್ಟರ್ ಮೂಲಕ ಮದುವೆಯಾಗಿರುವ ಬಗ್ಗೆ ನಿನ್ನೆ ಬಿಸಿಬಿಸಿ ಚರ್ಚೆಗೆ ಗ್ರಸ್ತವಾಗಿತ್ತು. ಈ ನಡುವೆ ಇಂದು ಸಂಜೆ ವೇಳೆ ಕೊಕ್ಕಡ ಪೇಟೆಯಲ್ಲಿ ಮತ್ತೋರ್ವ ಮುಸ್ಲಿಂ ಆಟೋ ಚಾಲಕನಿಗೆ ಹಿಂದೂ ಯುವಕರು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಏನಿದು ಪ್ರಕರಣ:

ಇಂದು ಮುಸ್ಲಿಂ ಚಾಲಕನ ಆಟೋದಲ್ಲಿ ಹಿಂದೂ ಯುವತಿ ಬಂದಿದ್ದು, ಈ ವೇಳೆ ಯುವತಿಯ ಪಾರ್ಸ್ ನಲ್ಲಿ ಹಣ ಇರಲ್ಲಿಲ್ಲ‌. ಆಗ ಚಾಲಕ ತನ್ನ ನಂಬರ್ ಕೊಡುತ್ತೇನೆ, ನೀವು ಅದಕ್ಕೆ ಪೇಟಿಎಮ್ ಮಾಡಿ ಎಂದಿದ್ದಾನೆ.

ಆಗ ಸ್ಥಳಕ್ಕೆ ಆಗಮಿಸಿದ ಹಿಂದೂ ಯುವಕರು, ನೀವು ಹಿಂದೂ ಯುವತಿಯರಿಗೆ ನಂಬರ್ ನೀಡುತ್ತಿರಾ ಎಂದು ಕೇಳಿದ್ದಾರೆ. ಈ ನಡುವೆ ಎರಡು ತಂಡದ ಗಲಾಟೆ ಹೆಚ್ಚಾಗಿದ್ದು ಈ ವೇಳೆ ಮುಸ್ಲಿಂ ಆಟೋ ಚಾಲಕನೊಬ್ಬನಿಗೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ತಕ್ಷಣ ಮಾಹಿತಿ ಪಡೆದ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಗಲಾಟೆಯನ್ನು ನಿಯಂತ್ರಣಗೊಳಿಸಿ ಸ್ಥಳದಿಂದ ಎಲ್ಲರನ್ನೂ ಚದುರಿಸಿದ್ದಾರೆ.

- Advertisement -
spot_img

Latest News

error: Content is protected !!