ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೆರವೇರಲಿದೆ.
ಈ ಪ್ರಯುಕ್ತ ಶ್ರೀಗಳವರು ಇಂದು ಬೆಂಗಳೂರು ಕಾಶೀ ಮಠದ ಮೊಕ್ಕಾಂನಿಂದ ಆಗಮಿಸಿದರು , ಶ್ರೀಗಳವರಿಗೆ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಭವ್ಯ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳವರು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಳಕ್ಕೆ ಭೇಟಿಯಿತ್ತು ಶ್ರೀಗಳವರಿಗೆ ಪಾದ ಪೂಜೆ ಸಮಿತಿಯ ಪದಾಧಿಕಾರಿಗಳಿಂದ ನೆರವೇರಿತು.
ಜೂನ್ 6ರ ಸೋಮವಾರದಂದು ಶ್ರೀ ಸಂಸ್ಥಾನದ ಪರಮಾಚಾರ್ಯರಾದ ಶ್ರೀಮದ್ ಸುಕೃತಿಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆ ನಡೆಯಲಿರುವುದು. ದಿನಾಂಕ 10 ರ ಶುಕ್ರವಾರದಂದು ಶ್ರೀಗಳವರ ಚಾತುರ್ಮಾಸ ವ್ರತ ಸ್ವೀಕಾರ ಕಾರ್ಯಕ್ರಮ ಜರಗಲಿರುವುದು .
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿಯ ಡಿ . ವಾಸುದೇವ ಕಾಮತ್ , ಕಸ್ತುರಿ ಸದಾಶಿವ ಪೈ , ಜಿ . ರತ್ನಾಕರ ಕಾಮತ್ , ಪ್ರಶಾಂತ್ ಪೈ , ದೀಪಕ್ ಕುಡ್ವ , ಅನಿಲ್ ಕಾಮತ್, ಸೂರಜ್ ಕಾಮತ್, ಅರುಣ್ ಕಾಮತ್ , ಉರ್ವಿ ರಾಧಾಕೃಷ್ಣ ಶೆಣೈ ಹಾಗೂ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು , ಜಿ ಯಸ್ ಬಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ . ಜಗನ್ನಾಥ್ ಕಾಮತ್ ಉಪಸ್ಥಿತರಿದ್ದರು.