Friday, June 26, 2026
Homeಕರಾವಳಿಕಾಸರಗೋಡು: ಆಸ್ತಿ ವಿವಾದ ಗುಂಡು ಹಾರಿಸಿ ಕೊಲೆಯಲ್ಲಿ ಅಂತ್ಯ, ಆರೋಪಿ ಪೊಲೀಸರಿಗೆ ಶರಣು

ಕಾಸರಗೋಡು: ಆಸ್ತಿ ವಿವಾದ ಗುಂಡು ಹಾರಿಸಿ ಕೊಲೆಯಲ್ಲಿ ಅಂತ್ಯ, ಆರೋಪಿ ಪೊಲೀಸರಿಗೆ ಶರಣು

- Advertisement -
- Advertisement -

ಕಾಸರಗೋಡು: ಕ್ಷುಲ್ಲಕ ಕಾರಣಕ್ಕಾಗಿ ಗುಂಡು ಹಾರಿಸಿ ವ್ಯಕ್ತಿಯೋರ್ವನನ್ನು ಕೊಲೆಗೈದ ಘಟನೆ ಕಾಸರಗೋಡು ಜಿಲ್ಲೆಯ ಪಿಲಿಕ್ಕೋಡ್ ನಲ್ಲಿ ನಡೆದಿದೆ. ಪಿಲಿಕ್ಕೋಡಿನ ಕೆ. ಸಿ ಸುರೇಂದ್ರನ್( 54) ಕೊಲೆಯಾದ ವ್ಯಕ್ತಿ. ಆರೋಪಿ ಸನಲ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ  ಕೆ. ಸಿ ಸುರೇಂದ್ರನ್

ನಿನ್ನೆ ಸಂಜೆ ಈ ದಾರುಣ ಕೃತ್ಯ ನಡೆದಿದೆ. ಸುರೇಂದ್ರನ್ ಹಾಗೂ ಸನಲ್ ನಡುವೆ ಆಸ್ತಿ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸನಲ್ ತನ್ನ ಬಂದೂಕಿನಿಂದ ಸುರೇಂದ್ರನ್ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಕುತ್ತಿಗೆಗೆ ತಾಗಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಸುರೇಂದ್ರನ್ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಚಂದೇರ ಪೊಲೀಸ್ ಠಾಣೆ ಗೆ ತಲುಪಿ ಶರಣಾಗಿದ್ದಾನೆ.

- Advertisement -

Latest News

error: Content is protected !!