- Advertisement -
- Advertisement -
ಉಡುಪಿ: ಸಾಲಿಗ್ರಾಮದ ವಿಶ್ವಕರ್ಮ ಸಭಾ ಭವನದಲ್ಲಿ ಕಾಂತಾರ ರಂಗೋಲಿ ರಚಿಸಲಾಗಿದೆ.
ಸುಮಾರು 7 ಅಡಿ ಎತ್ತರ 9 ಅಡಿ ಅಗಲವಿರುವ ರಂಗೋಲಿಯನ್ನು ಸ್ಫೂರ್ತಿ ಆಚಾರ್ಯ ಮತ್ತು ಅಶ್ವತ್ಥ್ ಆಚಾರ್ಯ ರಚಿಸಿದ್ದಾರೆ.
ಕರಾವಳಿ ಸಂಸ್ಕೃತಿ ಮತ್ತು ಆಚರಣೆ ಕುರಿತ ಕಥಾ ಹಂದರ ಇರುವ ಕಾಂತಾರ ಕನ್ನಡ ಚಲನಚಿತ್ರಕ್ಕೆ ರಂಗೋಲಿಯ ಮೂಲಕ ಅಭಿನಂದನೆ ಸಲ್ಲಿಸಲಾಗಿದೆ
ನಿನ್ನೆ ಮುಂಜಾನೆಯಿಂದ ಆರಂಭಗೊಂಡಿರುವ ರಂಗೋಲಿ ರಚನೆ ಕಾರ್ಯ ಇಂದು ಸಂಜೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಚಲನಚಿತ್ರದಲ್ಲಿ ಪಂಜುರ್ಲಿ ಪಾತ್ರ ನಿರ್ವಹಿಸಿರುವ ಮತ್ತು ಕೋಣ ಓಡಿಸುವ ನಟ ಮತ್ತು ರಿಷಭ್ ಶೆಟ್ಟಿ ಅವರನ್ನು ರಂಗೋಲಿಯಲ್ಲಿ ಚಿತ್ರಿಸಲಾಗಿದೆ.
- Advertisement -