Friday, June 27, 2025
HomeUncategorizedಕಡಬ; ಹಲ್ಲೆ ಪ್ರಕರಣದ ಆರೋಪಿ 13 ವರ್ಷಗಳ ಬಳಿಕ ಅರೆಸ್ಟ್

ಕಡಬ; ಹಲ್ಲೆ ಪ್ರಕರಣದ ಆರೋಪಿ 13 ವರ್ಷಗಳ ಬಳಿಕ ಅರೆಸ್ಟ್

spot_img
- Advertisement -
- Advertisement -

ಕಡಬ; ಹಲ್ಲೆ ಪ್ರಕರಣದ ಆರೋಪಿಯನ್ನು 13 ವರ್ಷಗಳ ಬಳಿಕ ಅರೆಸ್ಟ್ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.  ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ  ಆರೋಪಿಯೊಬ್ಬನನ್ನು ಕಡಬ ಪೊಲೀಸರು ಬಂಧಿಸಿದ್ದು ಮಾನ್ಯ  ನ್ಯಾಯಾಲಯವು  ನ್ಯಾಯಾಂಗ ಬಂಧನ ವಿಧಿಸಿದೆ. ಪಡ್ನೂರು ಗ್ರಾಮದ ನೆಲಪಾಲ ನಿವಾಸಿ ಶ್ರೀಶ ಬಂಧಿತ.

2010ರ ಎಪ್ರಿಲ್  15  ರಂದು ಸವಣೂರು ಪೇಟೆಯಲ್ಲಿ ಅಟ್ಟೋಳೆಯ  ಶೇಷಪ್ಪ ಎಂಬವರಿಗೆ ತಂಡವೊಂದು ಹಲ್ಲೆ ಮಾಡಿತ್ತು. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದರೂ ಓರ್ವ ಆರೋಪಿಯಾದ ಶ್ರೀಶ ತಲೆ ಮರೆಸಿಕೊಂಡಿದ್ದ. ಇದೀಗ ಹದಿಮೂರು ವರ್ಷಗಳ ಬಳಿಕ ತಲೆ ಕಡಬ ಪೊಲೀಸರು ಮಂಗಳೂರಿನ ಸುರತ್ಕಲ್ ನಲ್ಲಿ ಬಂಧಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್  ನಿರ್ದೇಶನದಂತೆ   ಠಾಣಾ ಎಸೈಗಳಾದ  ಅಭಿನಂದನ್, ಅಕ್ಷಯ್ ಡವಗಿ ಅವರ  ಆದೇಶದಂತೆ   ಸಿಬ್ಬಂದಿಯಾದ ರಾಜು ನಾಯಕ್ , ಪ್ರವೀಣ್,  ಇಸಾಕ್  ವಾರೆಂಟ್ ಆರೋಪಿಯ ಬಂಧನದ ತಂಡದಲ್ಲಿದ್ದರು.

ಉಲ್ಲೇಖ:  ಕಡಬ ಪೊಲೀಸ್ ಠಾಣಾ LPC No 03/2019  ಹಾಗೂ Crime no 56/2010 , ಕಲಂ-341,323 IPC ಮಾನ್ಯ ACJ & JMFC ಪುತ್ತೂರು ನ್ಯಾಯಾಲಯ  ಹಾಗೂ CC NO 1582/2012 ರಲ್ಲಿ LPC ವಾರೆಂಟ್ ಹೊರಡಿಸಲಾಗಿತ್ತು

- Advertisement -
spot_img

Latest News

error: Content is protected !!