Thursday, June 26, 2025
Homeಚಿಕ್ಕಮಗಳೂರುಚಿಕ್ಕಮಗಳೂರು :ಶರಣಾಗತಿಯತ್ತ ನಕ್ಸಲ್ ರವೀಂದ್ರನ ಚಿತ್ತ; ನಕ್ಸಲ್ ಮುಕ್ತವಾಗುತ್ತಾ ಕಾಫಿನಾಡು?

ಚಿಕ್ಕಮಗಳೂರು :ಶರಣಾಗತಿಯತ್ತ ನಕ್ಸಲ್ ರವೀಂದ್ರನ ಚಿತ್ತ; ನಕ್ಸಲ್ ಮುಕ್ತವಾಗುತ್ತಾ ಕಾಫಿನಾಡು?

spot_img
- Advertisement -
- Advertisement -

 ಚಿಕ್ಕಮಗಳೂರು : ನಕ್ಸಲ್ ರವೀಂದ್ರ ಇದೀಗ ಶರಣಾಗತಿಯಾಗಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರು ಜನ ನಕ್ಸಲರು ಶರಣಾಗಿದ್ದು ನಕ್ಸಲ್ ರವೀಂದ್ರ ಅವರು ಒಬ್ಬರೇ ಶರಣಾಗತಿಗೆ ಬಾಕಿ ಇದ್ದು ಅವರು ಶರಣಾದರೆ ಕಾಫಿನಾಡು ನಕ್ಸಲರಿಂದ ಮುಕ್ತವಾಗುತ್ತೆ ಎನ್ನಲಾಗಿದೆ.

ನಕ್ಸಲ್ ರವೀಂದ್ರ ಶರಣಾದರೆ ಕಾಫಿನಾಡ-ಕರುನಾಡು ನಕ್ಸಲರಿಂದ ಮುಕ್ತವಾಗುತ್ತೆ.ಈಗಾಗಲೇ ರವೀಂದ್ರ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ನಕ್ಸಲ  ರವೀಂದ್ರ ಇನ್ನೊಂದು ವಾರದೊಳಗೆ ಶರಣಾಗ್ತಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಇವರ ಮೇಲೆ 20 ಪ್ರಕರಣಗಳಿವೆ.

ರವೀಂದ್ರ @ ಕೋಟೆ ಹೊಂಡ ರವೀಂದ್ರ ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮದ ಮರಾಠಿ ಕಾಲೋನಿ ಹಲುಗಾರು ಬೈಲು ನಿವಾಸಿಯಾಗಿದ್ದಾರೆ. ರವೀಂದ್ರ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದವರಾಗಿದ್ದು, ಕಾಡಿನಲ್ಲಿ ಉಳಿದುಕೊಂಡಿದ್ದರು ಎನ್ನಲಾಗುತ್ತಿದೆ. ಜನವರಿ 8 ರಂದು 6 ಜನ ನಕ್ಸಲರು ಶರಣಾಗತಿಯಾಗಿದ್ದರು. ಶರಣಾದ ನಕ್ಸಲರು ಆಯುಧಗಳನ್ನು ರವೀಂದ್ರನ ಕೈಯಲ್ಲಿ ಕೊಟ್ಟು ಬಂದಿದ್ದರು ಎನ್ನುವ ವದಂತಿ ಇತ್ತು. ಆ ಬಂದೂಕುಗಳ ಸಮೇತ ಕೇರಳ- ತಮಿಳುನಾಡಿಗೆ ಪರಾರಿ ಆಗಿದ್ದರು ಎನ್ನಲಾಗಿತ್ತು. ಶೃಂಗೇರಿಯ ನಕ್ಸಲ ರವೀಂದ್ರ ಶರಣಾಗತಿಯಾದ್ರೆ  ಕರ್ನಾಟಕ ನಕ್ಸಲ್ ಮುಕ್ತವಾಗಲಿದೆ.

- Advertisement -
spot_img

Latest News

error: Content is protected !!