- Advertisement -
- Advertisement -
ಬೆಳ್ತಂಗಡಿ: ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥರನ್ನು ಉಪನ್ಯಾಸಕರಾಗಿ ಆಹ್ವಾನಿಸಿರುವುದಕ್ಕೆ ಗುರು ನಾರಾಯಣ ಸ್ವಾಮಿ ಸೇವಾ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘ, ರೋಹಿತ್ ಚಕ್ರತೀರ್ಥರು ಪಠ್ಯ ಪುಸ್ತಕ ಸಂಸ್ಕರಣಾ ಸಮಿತಿಯಲ್ಲಿದ್ದಾಗ ವಿಶ್ವಗುರು ಬಹ್ಮಶ್ರೀ ನಾರಾಯಣ ಗುರುಗಳ ವಿಚಾರಧಾರೆಯನ್ನು ಪಠ್ಯ ಪುಸ್ತಕದಿಂದ ತೆಗೆದುಹಾಕುವಂತಹ ದುಸ್ಸಾಹಸ ಮಾಡಿದವರು. ಇಂದಿಗೂ ಆ ವಿಷಯ ಸಮರ್ಪಕವಾಗಿ ಬಗೆ ಹರಿದಿಲ್ಲ. ಅಲ್ಲದೆ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಮತ್ತು ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ ಮಾಡಿದ್ದ ವಿವಾದಿತ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರೋದು ಗುರುಗಳ ಭಕ್ತರಾದ ನಮಗೆ ತೀವ್ರ ನೋವುಂಟು ಮಾಡಿದೆ. ಆದುದರಿಂದ ರೋಹಿತ್ ಚಕ್ರತೀರ್ಥರನ್ನು ಕಾರ್ಯಕ್ರಮದಿಂದ ಹೊರಗಿಡಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರಲ್ಲಿ ಸಂಘ ಮನವಿ ಮಾಡಿದೆ.
- Advertisement -