- Advertisement -
- Advertisement -
ಮಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ನಾಳೆ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ.
ನಾಳೆ ಬೆಳಗ್ಗೆ 7 ಗಂಟೆಗೆ ಮಂಗಳೂರಿಗೆ ಆಗಮಿಸಲಿರಿವ ಸಚಿವ ನಿರಾಣಿ, 8.30ಕ್ಕೆ ಸರ್ಕ್ಯುಟ್ ಹೌಸ್ ನಲ್ಲಿ ಜೆ.ಬಿ.ಎಫ್. ಪೆಟ್ರೋ ಕೆಮಿಕಲ್ಸ್ ಕಂಪನಿಯ ಉದ್ಯೋಗಿಗಳ ಸಮಸ್ಯೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಳಿಕ 9.30ಕ್ಕೆ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಕರ್ನಾಟಕ ಕೋಸ್ಟಲ್ ಲೈನ್ ಬ್ಯುಸಿನೆಸ್ ಮತ್ತು ಮೆರಿಟೈಮ್ ಕಾನ್ ಕ್ಲೇವ್ ಅನ್ನು ಮುರುಗೇಶ್ ನಿರಾಣಿ ಉದ್ಘಾಟಿಸಲಿದ್ದಾರೆ.
ಅನಂತರ ಬೆಳಗ್ಗೆ 10 ಗಂಟೆಗೆ ಕೊಡಿಯಾಲ್ ಬೈಲ್ ನ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆಷ್ಷನ್ ಹಾಲ್ ನಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ ಉದ್ಘಾಟಿಸಲಿರುವ ನಿರಾಣಿ, ಮಧ್ಯಾಹ್ನ 3 ಗಂಟೆಗೆ ಕೈಗಾರಿಕಾ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- Advertisement -