Saturday, April 27, 2024
Homeತಾಜಾ ಸುದ್ದಿಮಂಗಳೂರು- ಬೆಂಗಳೂರು ಹೆದ್ದಾರಿ ಸಂಚಾರ ದುಸ್ಥರ: ರೈಲು, ವಿಮಾನ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

ಮಂಗಳೂರು- ಬೆಂಗಳೂರು ಹೆದ್ದಾರಿ ಸಂಚಾರ ದುಸ್ಥರ: ರೈಲು, ವಿಮಾನ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

spot_img
- Advertisement -
- Advertisement -

ಮಂಗಳೂರುಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಕುಸಿತ ಉಂಟಾಗಿ ಸಂಚಾರ ದುಸ್ಥರವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರಿನ ನಡುವಿನ ಸಂಚಾರಕ್ಕೆ ರೈಲು ಹಾಗೂ ವಿಮಾನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

ಮಂಗಳೂರು- ಬೆಂಗಳೂರಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಮಾರನಹಳ್ಳಿ- ದೋಣಿಗಲ್‌ ನಡುವೆ ಅಲ್ಲಲ್ಲಿ ಹೆದ್ದಾರಿ ಬದಿ ಕುಸಿಯುತ್ತಿರುವ ಪರಿಣಾಮ ಕಳೆದೊಂದು ವಾರಗಳಿಂದ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಚಾರ್ಮಾಡಿ ಘಾಟಿ ಹೆದ್ದಾರಿ ಕೂಡಾ ಅಪಾಯಕಾರಿಯಾಗಿರುವ ಕಾರಣ ಆ ಮೂಲಕವೂ ಸಂಚಾರ ಯೋಗ್ಯವಲ್ಲ. ಇದೀಗ ಮಾಣಿ ಮೈಸೂರು ಹೆದ್ದಾರಿ ಮೂಲಕ ಮಂಗಳೂರು- ಬೆಂಗಳೂರನ್ನು ಸಂಪರ್ಕಿಸುವ ಪ್ರಯಾಣಿಕರ ಯತ್ನಕ್ಕೂ ಹಿನ್ನಡೆಯಾಗಿದೆ. ಮಡಿಕೇರಿ ಬಳಿ ಹೆದ್ದಾರಿ ಕುಸಿಯುವ ಅಪಾಯ ಇರುವ ಹಿನ್ನೆಲೆಯಲ್ಲಿ ಅಲ್ಲೂ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಸಂಚರಿಸಬೇಕಾದ ಅನೇಕ ಪ್ರಯಾಣಿಕರು ರೈಲು ಹಾಗೂ ವಿಮಾನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಮಂಗಳೂರು- ಬೆಂಗಳೂರು ನಡುವೆ ರಾತ್ರಿ ವೇಳೆಯಲ್ಲಿ ಪ್ರತಿದಿನ ಕೇವಲ ಒಂದು ರೈಲು ಸಂಚಾರ ನಡೆಸುತ್ತಿದೆ. ಇನ್ನೊಂದು ರೈಲು ವಾರದಲ್ಲಿ ಮೂರು ದಿನ ವಯಾ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದೆ. ಸಾಮಾನ್ಯ ದಿನಗಳಲ್ಲೇ ಈ ರೈಲಿಗೆ ಸಾಕಷ್ಟು ಬೇಡಿಕೆ ಇದ್ದು ತಕ್ಷಣಕ್ಕೆ ಟಿಕೆಟ್‌ ಲಭ್ಯವಾಗುತ್ತಿಲ್ಲ. ಇದೀಗ ಹೆದ್ದಾರಿ ಪ್ರಯಾಣಕ್ಕೆ ಕಷ್ಟ ಸಾಧ್ಯವಾದ ಕಾರಣ ರೈಲು ಪ್ರಯಾಣಕ್ಕೆ ದಿಢೀರ್‌ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ನಡುವಿನ ರೈಲುಗಳು ಕಳೆದ ಕೆಲವು ದಿನಗಳಿಂದ ಹೌಸ್‌ಫುಲ್‌ ಆಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ಟಿಕೆಟ್‌ ಕಾದಿರಿಸಿಕೊಳ್ಳಲು ಪರದಾಡುವಂತಾಗಿದೆ.

ಮಂಗಳೂರು ಸೆಂಟ್ರಲ್‌- ಬೆಂಗಳೂರು ನಡುವೆ ಪ್ರತಿದಿನ ರಾತ್ರಿ ಕೇವಲ ಒಂದು ರೈಲು ಸಂಚಾರ ನಡೆಸುತ್ತಿದೆ. ಇನ್ನೊಂದು ರೈಲು ವಯಾ ಮೈಸೂರು ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಸಂಚಾರ ನಡೆಸುತ್ತಿದೆ. ಸದ್ಯ ಹೆದ್ದಾರಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ತಕ್ಷಣಕ್ಕೆ ಹೆಚ್ಚುವರಿಯಾಗಿ ಇನ್ನೊಂದು ರೈಲು ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಇದು ಸಾಧ್ಯವಾಗದೇ ಇದ್ದರೆ ಕನಿಷ್ಠ ವಯಾ ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲನ್ನು ಪ್ರತಿದಿನ ಸಂಚರಿಸುವ ವ್ಯವಸ್ಥೆ ಮಾಡಿಸಬೇಕು ಎಂಬ ಬೇಡಿಕೆ ಇದೆ.

ಇನ್ನು ಮಂಗಳೂರು- ಬೆಂಗಳೂರು ನಡುವೆ ಪ್ರತಿದಿನ 6 ವಿಮಾನಗಳು ನಿರ್ವಹಣೆಗೊಳ್ಳುತ್ತಿವೆ. ಮಳೆಗಾಲ ಆದರೂ ಕಳೆದ ಕೆಲವು ದಿನಗಳಿಂದ ಈ ಮಾರ್ಗದ ವಿಮಾನಗಳು ಭರ್ತಿಯಾಗಿ ಸಂಚಾರ ನಡೆಸುತ್ತಿವೆ. ಹೆದ್ದಾರಿ ಸಂಚಾರ ಇನ್ನಷ್ಟು ದಿನಗಳ ಕಾಲ ಕಷ್ಟಸಾಧ್ಯವಾದರೆ ವಿಮಾನ ದರವೂ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣಲಿದೆ. ಸದ್ಯ ಬೆಳಗ್ಗಿನ ಅವಧಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಯಾವುದೇ ವಿಮಾನ ಸೇವೆ ಇಲ್ಲದಿದ್ದು, ಜು.27ರಿಂದ ಸ್ಪೈಸ್‌ ಜೆಟ್‌ ವಿಮಾನ ಬೆಳಗ್ಗಿನ ಅವಧಿಯಲ್ಲಿ ಎರಡು ವಿಮಾನಗಳನ್ನು ನಿರ್ವಹಿಸಲು ಸಿದ್ಧತೆ ನಡೆಸಿದೆ.

- Advertisement -
spot_img

Latest News

error: Content is protected !!