Saturday, May 18, 2024
Homeತಾಜಾ ಸುದ್ದಿಅಪಘಾತದಲ್ಲಿ ಮೃತಪಟ್ಟ ಮಗ: ಪ್ರತಿದಿನ ಮಗನನ್ನು ನೋಡಲು ಪೋಷಕರು ಮಾಡಿದ್ದೇನು ಗೊತ್ತಾ?

ಅಪಘಾತದಲ್ಲಿ ಮೃತಪಟ್ಟ ಮಗ: ಪ್ರತಿದಿನ ಮಗನನ್ನು ನೋಡಲು ಪೋಷಕರು ಮಾಡಿದ್ದೇನು ಗೊತ್ತಾ?

spot_img
- Advertisement -
- Advertisement -

ತಮಿಳುನಾಡು: ಇಲ್ಲಿನ ದಿಂಡಿಗಲ್​​ ಜಿಲ್ಲೆಯ ಒಡ್ಡಂಛತ್ರಂನಲ್ಲಿ 2020 ರ ಜೂನ್​ 28ರಂದು ರಸ್ತೆ ಅಪಘಾತದಲ್ಲಿ ಎಸ್​. ಪಾಂಡಿದುರೈ ಎಂಬ ಯುವಕ ಸಾವನ್ನಪ್ಪಿದ್ದ.  ಮಗನನ್ನು ಕಳೆದುಕೊಂಡ ಪೋಷಕರೆಗೆ ದಿಕ್ಕೇ ತೋಚದಾಗಿದ್ದರು.

ಹೇಗಾದರೂ ಸರಿ ಮಗನನ್ನು ತಮ್ಮ ಜೊತೆ ಸದಾ ಇರುವಂತೆ ಮಾಡಬೇಕು ಎಂದು ನಿರ್ಧರಿಸಿದ ಪೋಷಕರು ಪಾಂಡಿದುರೈರಂತೆಯೇ ಕಾಣುವ ಮೇಣದ ಪ್ರತಿಮೆಯನ್ನು ನಿರ್ಮಿಸಿ ಮನೆಯ ಲಿವಿಂಗ್​ ಏರಿಯಾದಲ್ಲಿ ಇರಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಯುವಕನ ತಾಯಿ ಪಸುಮುಕಿಜಿ, ನನ್ನ ಮುದ್ದಿನ ಮಗ ಪಾಂಡಿದುರೈ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದ. ಆತ ಸಾವನ್ನಪ್ಪಿದ ಕೆಲವು ತಿಂಗಳ ಬಳಿಕ ಆತನನ್ನೇ ಹೋಲುವ ಪ್ರತಿಮೆಯನ್ನು ನಿರ್ಮಿಸಲು ನಾವು ನಿರ್ಧರಿಸಿದೆವು. ಇದೀಗ ನಮ್ಮ ಕಲ್ಪನೆಯು ವಾಸ್ತವಕ್ಕೆ ಬಂದಿದೆ. ಈ ಮೂರ್ತಿಯನ್ನು ನಾವು ಮನೆಯ ಲಿವಿಂಗ್​ ರೂಮಿನಲ್ಲಿ ಇರಿಸಿದ್ದೇವೆ. ಇದೊಂದು ಸಿಲಿಕಾನ್​ ಪ್ರತಿಮೆಯಾಗಿದ್ದರೂ ಸಹ ಮಗನನ್ನು ಈ ರೀತಿಯಲ್ಲಾದರೂ ನೋಡಬಹುದು ಎಂಬ ಖುಷಿ ನನಗಿದೆ ಎಂದು ಎಂದಿದ್ದಾರೆ.

- Advertisement -
spot_img

Latest News

error: Content is protected !!