ತಮಿಳುನಾಡು: ಇಲ್ಲಿನ ದಿಂಡಿಗಲ್ ಜಿಲ್ಲೆಯ ಒಡ್ಡಂಛತ್ರಂನಲ್ಲಿ 2020 ರ ಜೂನ್ 28ರಂದು ರಸ್ತೆ ಅಪಘಾತದಲ್ಲಿ ಎಸ್. ಪಾಂಡಿದುರೈ ಎಂಬ ಯುವಕ ಸಾವನ್ನಪ್ಪಿದ್ದ. ಮಗನನ್ನು ಕಳೆದುಕೊಂಡ ಪೋಷಕರೆಗೆ ದಿಕ್ಕೇ ತೋಚದಾಗಿದ್ದರು.
ಹೇಗಾದರೂ ಸರಿ ಮಗನನ್ನು ತಮ್ಮ ಜೊತೆ ಸದಾ ಇರುವಂತೆ ಮಾಡಬೇಕು ಎಂದು ನಿರ್ಧರಿಸಿದ ಪೋಷಕರು ಪಾಂಡಿದುರೈರಂತೆಯೇ ಕಾಣುವ ಮೇಣದ ಪ್ರತಿಮೆಯನ್ನು ನಿರ್ಮಿಸಿ ಮನೆಯ ಲಿವಿಂಗ್ ಏರಿಯಾದಲ್ಲಿ ಇರಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಯುವಕನ ತಾಯಿ ಪಸುಮುಕಿಜಿ, ನನ್ನ ಮುದ್ದಿನ ಮಗ ಪಾಂಡಿದುರೈ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದ. ಆತ ಸಾವನ್ನಪ್ಪಿದ ಕೆಲವು ತಿಂಗಳ ಬಳಿಕ ಆತನನ್ನೇ ಹೋಲುವ ಪ್ರತಿಮೆಯನ್ನು ನಿರ್ಮಿಸಲು ನಾವು ನಿರ್ಧರಿಸಿದೆವು. ಇದೀಗ ನಮ್ಮ ಕಲ್ಪನೆಯು ವಾಸ್ತವಕ್ಕೆ ಬಂದಿದೆ. ಈ ಮೂರ್ತಿಯನ್ನು ನಾವು ಮನೆಯ ಲಿವಿಂಗ್ ರೂಮಿನಲ್ಲಿ ಇರಿಸಿದ್ದೇವೆ. ಇದೊಂದು ಸಿಲಿಕಾನ್ ಪ್ರತಿಮೆಯಾಗಿದ್ದರೂ ಸಹ ಮಗನನ್ನು ಈ ರೀತಿಯಲ್ಲಾದರೂ ನೋಡಬಹುದು ಎಂಬ ಖುಷಿ ನನಗಿದೆ ಎಂದು ಎಂದಿದ್ದಾರೆ.