Friday, June 27, 2025
Homeಕರಾವಳಿಭಾರೀ ಮಳೆಗೆ ತಾಲೂಕಿನ ಹಲವೆಡೆ ಹಾನಿ; ಓರ್ವ ಮಹಿಳೆ ಸಾವು

ಭಾರೀ ಮಳೆಗೆ ತಾಲೂಕಿನ ಹಲವೆಡೆ ಹಾನಿ; ಓರ್ವ ಮಹಿಳೆ ಸಾವು

spot_img
- Advertisement -
- Advertisement -

ಮೂಡುಬಿದಿರೆ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೂಡುಬಿದಿರೆ ಪ್ರದೇಶದ ಹಲವೆಡೆ ಮನೆ, ಕಟ್ಟಡ, ತಡೆಗೋಡೆ, ಅವರಣ ಗೋಡೆ, ಸೇತುವೆ ಕುಸಿತ, ರಸ್ತೆಗಳು ಕೊಚ್ಚಿಹೋದ ಪ್ರಕರಣಗಳು ವರದಿಯಾಗಿವೆ.

ಜು.31ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ನೆಲ್ಲಿಕಾರು ಗ್ರಾಮದಲ್ಲಿ ಗೋಪಿ ಎಂಬವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ.

ಮೃತಪಟ್ಟ ಮಹಿಳೆ ಗೋಪಿ (56) ಸಹಿತ ಆ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳ ಸಹಿತ 5 ಮಂದಿ ವಾಸವಾಗಿದ್ದರು. ಗೋಪಿ ಅವರಿಗೆ ತೀವ್ರ ಏಟು ತಗಲಿದ್ದು, ತಕ್ಷಣ ಹೊಸ್ಮಾರು ಆಸ್ಪತ್ರೆಗೆ ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗದೆ ತಡರಾತ್ರಿ ಮೃತಪಟ್ಟರು.

ಮುರಕಲ್ಲಿನ ಗೋಡೆ ಕುಸಿದು ಗೋಪಿ ಅವರ ಮೇಲೆಯೇ ಬಿದ್ದಿತ್ತು ಎಂದು ಮಕ್ಕಳಾದ ಗಣೇಶ, ರಾಜೇಶ, ಸತೀಶ ಹೊರಗೆ ಓಡಿ ಹೋದ ಕಾರಣ ಪ್ರಾಣಾಪಾಯದಿಂದ ಪಾರಾದರೆಂದೂ ಹೇಳಲಾಗಿದೆ. ಮಕ್ಕಳೆಲ್ಲರೂ ಕೂಲಿ ಕಾರ್ಮಿಕರು.

ತಾಲೂಕಿನಲ್ಲಿ ಮಳೆಯಿಂದಾಗಿ ಜೀವಹಾನಿ ಸಂಭವಿಸಿರುವ ಮೊದಲ ಪ್ರಕರಣ ಇದಾಗಿದೆ.

ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ತಹಶೀಲ್ದಾರ್ ಪ್ರದೀಪ್ ವಿ. ಕುರ್ಡೇಕರ್, ಆರ್ ಐ. ಮಂಜುನಾಥ್, ನೆಲ್ಲಿಕಾರು ಪಂ. ಅಧ್ಯಕ್ಷ ಉದಯ ಪೂಜಾರಿ,‌ ಪಿಡಿಓ ಪ್ರಶಾಂತ ಶೆಟ್ಟಿ, ಕಾರ್ಯದರ್ಶಿ ದಾಮೋದರ, ಸಿಬಂದಿ ಪ್ರಶಾಂತ್ ಜೈನ್, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -
spot_img

Latest News

error: Content is protected !!