- Advertisement -
- Advertisement -
ಪುತ್ತೂರು : ಇಲ್ಲಿನ ನಗರ ಸಭೆ ವ್ಯಾಪ್ತಿಯ ಉಧ್ಯಮವೊಂದು ಬಡವರಿಗೆ ಬಿಪಿಎಲ್ ಕಾರ್ಡ್ ಮೂಲಕ ದೊರೆಯುವ ಅಕ್ಕಿಯನ್ನು ಅಧಿಕ ಬೆಲೆಗೆ ಕೊಂಡು ಸಂಗ್ರಹಿಸಿ ಪಾಲಿಶ್ ನಂತರ ದುಪ್ಪಟ್ಟು ಬೆಲೆಗೆ ಮಾರುವ ವ್ಯವಸ್ಥಿತ ಜಾಲವನ್ನು ಹೊಂದಿತ್ತು. ಪುತ್ತೂರು ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಬಕ ಸಮೀಪದ ಪೋಳ್ಯದಲ್ಲಿ ವಾಹನ ತಪಾಸಣೆಯಲ್ಲಿ ಕೃತ್ಯ ಬಯಲಾಗಿದೆ.
ಆರೋಪಿಗಳು ಮೂಟೆಗಟ್ಟಲೆ ಅಕ್ಕಿಯನ್ನು ಮಂಗಳೂರಿನ ಮಿಲ್ ಒಂದಕ್ಕೆ ಸಾಗಿಸುತ್ತಿದ್ದರು. ಬೆಳ್ಳಾರೆ ಕಾವಿನಮೂಲೆಯ ಖಲಂದರ್ ಬಿನ್ ಅಬ್ದುಲ್ ಖಾದರ್ ಹಾಗು ಸವಣೂರಿನ ಜ್ಹಕಾರಿಯಾ ಬಿನ್ ಅಬ್ದುಲ್ಲಾನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
- Advertisement -