Friday, May 3, 2024
Homeಕರಾವಳಿಬೆಳ್ತಂಗಡಿ : ಸ್ಕೂಟರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ: ಬೆಳ್ತಂಗಡಿ ಅಬಕಾರಿ ದಳದಿಂದ ದಾಳಿ ಆರೋಪಿ ಪರಾರಿ,ಮದ್ಯ...

ಬೆಳ್ತಂಗಡಿ : ಸ್ಕೂಟರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ: ಬೆಳ್ತಂಗಡಿ ಅಬಕಾರಿ ದಳದಿಂದ ದಾಳಿ ಆರೋಪಿ ಪರಾರಿ,ಮದ್ಯ ವಶಕ್ಕೆ

spot_img
- Advertisement -
- Advertisement -

ಬೆಳ್ತಂಗಡಿ : ವಿಧಾನಸಭಾ ಚುನಾವಣೆ ಪೂರ್ವಭಾವಿ ತಯಾರಿ ಸಂಬಂಧ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಸ್ತು ನಡೆಸುತ್ತಿದ್ದ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ದಿಡುಪೆ-ಕಜಕ್ಕೆ ಹೋಗುವ ಡಾಮರು ಮಾರ್ಗದಲ್ಲಿ ಮಾ.16 ರಂದು ಸಂಜೆ ದ್ವಿಚಕ್ರ ವಾಹನ KA-70-J-0188 ರಲ್ಲಿ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಲಾಯಿದಡ್ಡು ನಿವಾಸಿ ಸತೀಶ್ ಗೌಡ ಎಂಬಾತ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 4.140 ಲೀಟರ್ ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಹೊಂದಿರುವುದನ್ನು ಪತ್ತೆಹಚ್ಚಿದ್ದು ಈ ವೇಳೆ ಅಬಕಾರಿ ದಳದವರನ್ನು ನೋಡಿ ಆರೋಪಿ ಸತೀಶ್ ಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.‌ ಸ್ಕೂಟರ್ ಮತ್ತು ಮದ್ಯವನ್ನು ವಶಪಡಿಸಿಕೊಂಡಿದ್ದು. ವಶಪಡಿಸಿಕೊಂಡ ವಾಹನ ಮತ್ತು ಮದ್ಯದ ಮೌಲ್ಯ ಸುಮಾರು 76,200/- ಅಗಿರುತ್ತದೆ.ಈ ಬಗ್ಗೆ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

ಬೆಳ್ತಂಗಡಿ ವಲಯ ಅಬಕಾರಿ ಉಪ ನಿರೀಕ್ಷಕರಾದ ಸಯ್ಯದ್ ಶಬೀರ್ ಅಬಕಾರಿ ಕಾನ್ಸ್ ಟೇಬಲ್  ಭೋಜ ಕೆ, ಶ ವಿನೋಯ್ ಸಿ.ಜೆ ಮತ್ತು ವಾಹನ ಚಾಲಕರಾದ ನವೀನ್ ಕುಮಾರ್ ಪಿ. ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!