Friday, May 17, 2024
Homeತಾಜಾ ಸುದ್ದಿಮಂಗಳೂರು: ಬೆಂಬಲ ಬೆಲೆ ಘೋಷಿಸದಿದ್ದರೆ ಪಡಿತರ ಕುಚಲಕ್ಕಿ ಯೋಜನೆಗೆ ವಿಘ್ನ: ಅನ್ಯರಾಜ್ಯದ ಪಾಲಾಗುತ್ತಿದೆ ಭತ್ತ

ಮಂಗಳೂರು: ಬೆಂಬಲ ಬೆಲೆ ಘೋಷಿಸದಿದ್ದರೆ ಪಡಿತರ ಕುಚಲಕ್ಕಿ ಯೋಜನೆಗೆ ವಿಘ್ನ: ಅನ್ಯರಾಜ್ಯದ ಪಾಲಾಗುತ್ತಿದೆ ಭತ್ತ

spot_img
- Advertisement -
- Advertisement -

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಈ ವರ್ಷಾಂತ್ಯದಿಂದ ಪಡಿತರಕ್ಕೆ ಕುಚಲಕ್ಕಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದರೂ, ಬೇಡಿಕೆಯಷ್ಟು ಕುಚಲಕ್ಕಿ ಕಸರತ್ತು ನಡೆಸಬೇಕಾಗಿದೆ. ಮುಖ್ಯವಾಗಿ ಕೇರಳ ಮಾದರಿಯಲ್ಲಿ ರಾಜ್ಯ ಸರಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸದಿದ್ದಲ್ಲಿ ಕುಚಲಕ್ಕಿ ವಿತರಣೆ ಯೋಜನೆಗೆ ಮತ್ತೆ ಹಿನ್ನಡೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,435 ಹೆಕ್ಟೇರ್‌ ಮತ್ತು ಉಡುಪಿ ಜಿಲ್ಲೆಯಲ್ಲಿ 29,726 ಹೆಕ್ಟೇರ್‌ ಕುಚಲಕ್ಕಿ ಭತ್ತಕೃಷಿ ಮಾಡಲಾಗುತ್ತಿದ್ದು, ವರ್ಷಕ್ಕೆ 2,500 ಲಕ್ಷ ಕ್ವಿಂಟಾಲ್‌ ಭತ್ತ ಉತ್ಪಾದನೆಯಾಗುತ್ತಿದೆ. ಕರಾವಳಿ ಜಿಲ್ಲೆಗೆ ಕುಚಲಕ್ಕಿ ವಿತರಿಸಬೇಕಾದರೆ ಕನಿಷ್ಠ 1 ಲಕ್ಷ ಕ್ವಿಂಟಾಲ್‌ ಅಕ್ಕಿಯ ಅವಶ್ಯಕತೆಯಿದ್ದು, ವರ್ಷಕ್ಕೆ 12 ಲಕ್ಷ ಕ್ವಿಂಟಾಲ್‌ ಅಕ್ಕಿಯ ಅಗತ್ಯವಿದೆ. ಈ ಕಾರಣದಿಂದ ಕುಚಲಕ್ಕಿಗಾಗಿ ನೆರೆಯ ಜಿಲ್ಲೆಗಳಾದ ಬೆಳಗಾವಿ, ಚಾಮರಾಜನಗರ, ಹಾಸನ, ಶಿವಮೊಗ್ಗ ಅಥವಾ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣದ ಅಕ್ಕಿಯನ್ನೇ ಅವಲಂಬಿಸಬೇಕಿದೆ.

ರಾಜ್ಯ ಸರಕಾರ 2021ರ ಡಿಸೆಂಬರ್‌ನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಇದು ಕರಾವಳಿ ಜಿಲ್ಲೆಯ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕರಾವಳಿಯಲ್ಲಿ ಜೂನ್‌ ತಿಂಗಳಲ್ಲಿ ಭತ್ತ ನಾಟಿಯಾಗಿ ಸೆಪ್ಟೆಂಬರ್‌ನಲ್ಲಿ ಕಟಾವು ಆಗುತ್ತಿದೆ. ಕರಾವಳಿ ಭಾಗದಲ್ಲಿ ತಿಂಗಳುಗಟ್ಟಲೆ ಭತ್ತವನ್ನು ದಾಸ್ತಾನು ಮಾಡದೆ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಇದರಿಂದ ಈ ಭತ್ತಗಳು ಕೇರಳ, ತಮಿಳುನಾಡು ರಾಜ್ಯದ ಪಾಲಾಗುತ್ತಿದೆ ಎನ್ನುತ್ತಾರೆ ದ.ಕ. ಜಿಲ್ಲಾ ರೈತ ಸಂಘದ ಅಧ್ಯಕ್ಷ ಓಸ್ವಾಲ್‌ ಫರ್ನಾಂಡಿಸ್‌.

ಭತ್ತಕ್ಕೆ ಕೇಂದ್ರ ಸರಕಾರ 1940ರೂ. ಇದ್ದ ಬೆಂಬಲ ಬೆಲೆಯನ್ನು 2040 ರೂ.ಗೆ ಏರಿಸಿದೆ. ಕೇರಳ ಸರಕಾರ ಇದಕ್ಕೆ 840ರೂ. ಹೆಚ್ಚುವರಿ ಬೆಂಬಲ ಬೆಲೆ ನೀಡಿ ರೈತರಿಂದ ಖರೀದಿಸುತ್ತಿರುವ ಕಾರಣ ಅಲ್ಲಿ ರೈತರಿಗೆ ಕ್ವಿಂಟಾಲ್‌ಗೆ 2840ರೂ. ಬೆಂಬಲ ಬೆಲೆ ಸಿಗುತ್ತಿದೆ. ಆದರೆ ರಾಜ್ಯದಲ್ಲಿ ಸರಿಯಾದ ಬೆಲೆ ಸಿಗದ ಕಾರಣ ಇದೇ ಭತ್ತವನ್ನು ಕೇರಳದ ಅಕ್ಕಿ ಗಿರಾಣಿ ಮಾಲೀಕರಿಗೆ ಮಾರಾಟ ಮಾಡಲಾಗುತ್ತಿದೆ. ಈ ಕಾರಣದಿಂದ ಕುಚಲಕ್ಕಿ ಪಡಿತರ ಯೋಜನೆ ಯಶಸ್ವಿಯಾಗಬೇಕಾದರೆ ಸೆಪ್ಟೆಂಬರ್‌ ತಿಂಗಳಾಂತ್ಯದೊಳಗೆ ರಾಜ್ಯ ಸರಕಾರ ಹೆಚ್ಚುವರಿ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಬೇಕಾಗಿದೆ. ಇಲ್ಲದಿದ್ದಲ್ಲಿ ಈ ಬಾರಿಯೂ ಯೋಜನೆಗೆ ಹಿನ್ನಡೆಯಾಗಲಿದೆ ಎನ್ನುತ್ತಾರೆ ಭತ್ತ ಕೃಷಿಕರು.

- Advertisement -
spot_img

Latest News

error: Content is protected !!