Friday, April 26, 2024
Homeತಾಜಾ ಸುದ್ದಿನಾನು ಮಂಗಳಮುಖಿ ಎಂದ ಪಾದರಾಯನಪುರ ಲೇಡಿ ಡಾನ್ ಫರೋಜಾ

ನಾನು ಮಂಗಳಮುಖಿ ಎಂದ ಪಾದರಾಯನಪುರ ಲೇಡಿ ಡಾನ್ ಫರೋಜಾ

spot_img
- Advertisement -
- Advertisement -

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತ ಏಕೈಕ ಮಹಿಳೆ ಫರೋಜಾ ವಿಚಾರಣೆ ಸಂದರ್ಭದಲ್ಲಿ ತಾನು ಮಂಗಳಮುಖಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಭಾನುವಾರ ರಾತ್ರಿ ಬೆಂಗಳೂರು ಚಾಮರಾಜಪೇಟೆ ಕ್ಷೇತ್ರದ ಪಾದರಾಯನಪುರದಲ್ಲಿ ಕೊರೋನಾ ಸೇವೆಯಲ್ಲಿ ನಿರತರಾಗಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ದುಷ್ಕರ್ಮಿಗಳ ಗುಂಪು ಹಾನಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೋಜಾ ಸೇರಿದಂತೆ ಹಲವರನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮುಂದೆ ನಿಂತು ಗಲಾಟೆ ಮಾಡಿಸಿದ ಆರೋಪದ ಮೇಲೆ ಫರೋಜಾಳನ್ನು ಬಂಧಿಸಲಾಗಿದೆ. ಈಕೆ ಗಲಾಟೆಗೆ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿದೆ.

ಬಂಧಿತರಲ್ಲಿ ಈಕೆಯೊಬ್ಬಳೇ ಮಹಿಳೆಯಾಗಿದ್ದಾರೆ. ಗಾಂಜಾ ಮಾರಾಟ ಸೇರಿದಂತೆ ಹಲವು ಪ್ರಕರಣಗಳನ್ನು ಫರೋಜಾ ವಿರುದ್ಧ ದಾಖಲಿಸಿ ವಿಚಾರಣೆ ನಡೆಸಲಾಗಿದೆ ವಿಚಾರಣೆ ಸಂದರ್ಭದಲ್ಲಿ ತಾನು ಮಂಗಳಮುಖಿ ಎಂದು ಫರೋಜಾ ಹೇಳಿಕೊಂಡಿದ್ದು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!