ಮೈಸೂರು : ಮುನಿಸಿಕೊಂಡು ತವರು ಮನೆ ಸೇರಿದ ಪತ್ನಿಯನ್ನು ವಾಪಾಸ್ಸು ಕರೆ ತರೋದಕ್ಕೆ ಸಾಧ್ಯವಾಗದೇ ಕೊನೆಗೆ ಪತಿರಾಯ ಅವಳು ನನಗೆ ಬೇಕು. ಅವಳು ಬಾರದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಗರದಲ್ಲಿ ನಡೆದಿದೆ.
ಗೌರಿಶಂಕರ್ ಎಂಬಾತ, ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳದಿಂದಾಗಿ ಮನನೊಂದಂತ ಪತ್ನಿ ನನಗೆ ಗಂಡ ಬೇಡ ಎಂಬುದಾಗಿ ಹೇಳಿ ಗೌರಿ ಶಂಕರ್ ಬಿಟ್ಟು, ತವರಿಗೆ ಹೋಗಿದ್ದಾಳೆ. ಇದರಿಂದ ಬೇಸರಗೊಂಡ ಪತಿ ಗೌರಿ ಶಂಕರ್, ನನಗೆ ಹೆಂಡತಿ ಬೇಕು. ಅವಳೆಂದ್ರೇ ಇಷ್ಟ.. ಪತ್ನಿ ನನ್ನೊಂದಿಗೆ ಜಗಳ ಮಾಡಿಕೊಂಡು ತವರಿಗೆ ಹೋಗಿದ್ದಾಳೆ. ಹೀಗಾಗಿ ಆಕೆಯನ್ನು ವಾಪಾಸ್ ಕರೆಸಿಕೊಳ್ಳೋದಕ್ಕಾಗಿ ಮೊಬೈಲ್ ಟವರ್ ಏರಿದ್ದಾನೆ. ಹೀಗೆ ಏರಿದವನೇ ತನ್ನ ಹೆಂಡತಿ ಸ್ಥಳಕ್ಕೆ ಬರೋವರೆಗೆ ತಾನು ಕೆಳಗೆ ಇಳಿಯೋದಿಲ್ಲ ಎಂಬುದಾಗಿ ಹೇಳಿದ್ದಾನೆ. ಅಲ್ಲದೇ ಆಕೆ ಬಾರದೇ ಇದ್ದರೇ ಮೊಬೈಲ್ ಟವರ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾನೆ.
ಹೀಗೆ ಮೊಬೈಲ್ ಟವ್ ಏರಿದ ಗೌರಿ ಶಂಕರ್ ನನ್ನು ಎರಡು ಗಂಟೆಗಳ ಕಾಲ ಮನವೊಲಿಸಿ ಮೊಬೈಲ್ ಟವರ್ ನಿಂದ ಇಳಿಸಿದ್ದಾರೆ. ಆ ಬಳಿಕ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಕರೆದೊಯ್ದು, ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆಗೆ ಯತ್ನ ಕೇಸ್ ದಾಖಲಿಸಿದ್ದಾರೆ.