ಬೆಳ್ತಂಗಡಿ : ಪತ್ನಿ ಮತ್ತು ಮಗಳ ಮೇಲೆ ಪತಿ ಮರಣಾಂತಿ ಹಲ್ಲೆ ನಡೆಸಿದ ಘಟನೆ ಶಿಶಿಲದಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆ ಬಾಗಿಲು ನಿವಾಸಿ ಸುರೇಶ್ ಗೌಡ(55) ಎಂಬಾತ ತನ್ನ ಪತ್ನಿ, ಮಗಳಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.18 ರಂದು ತಡರಾತ್ರಿ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ನಿವಾಸಿ ಸುರೇಶ್ ಗೌಡ(55) ಕಳೆದ 22 ವರ್ಷದ ಹಿಂದೆ ಮೋಹಿನಿ (55) ಯನ್ನು ಮದುವೆಯಾಗಿದ್ದು. ಪತ್ನಿ ತಂದೆ ನೀಡಿದ ಜಾಗದಲ್ಲಿ ಮನೆ ಮಾಡಿ ವಾಸವಾಗಿದ್ದು. ಈ ದಂಪತಿಗೆ 19 ವರ್ಷದ ಮಗಳಿದ್ದು. ಆಕೆ ಸ್ಥಳೀಯ ಶಾಪ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದಾಳೆ. ಪತಿ ಕುಡಿದ ಮತ್ತಿನಲ್ಲಿ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದು ಕಣ್ಣಿಗೆ ಕೂಡ ಕಚ್ಚಿ ನಂತರ ಕೋಲಿನಿಂದ ಹೊಡೆದು ಎಡ ಭಾಗದ ಕಣ್ಣನ್ನು ಸಂಪೂರ್ಣ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಗಳು ಪೂಜಾ(19) ಗೆ ತಲೆಯ ಭಾಗಕ್ಕೆ ಮತ್ತು ಕಣ್ಣಿಗೆ ಹೊಡೆದಿದ್ದು, ಪ್ರಾಣ ಭಯದಿಂದ ಇಬ್ಬರು ತಪ್ಪಿಸಿಕೊಂಡಿದ್ದು ಮಗಳು ನೆರೆಯ ಮನೆಗೆ ಬಂದು ವಿಷಯ ತಿಳಿಸಿದಾಗ ವಿಪತ್ತು ನಿರ್ವಹಣಾ ತಂಡ, ನೆರೆಹೊರೆಯವರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ನಂತರ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭ ಆರೋಪಿ ಪತಿ ಸುರೇಶ್ನ ಹಲ್ಲೆ ಮಾಡಿದ ಬಳಿಕ ತೋಟದಲ್ಲಿ ತಪ್ಪಿಸಿಕೊಂಡಿದ್ದು. ಆರೋಪಿಗಾಗಿ ಧರ್ಮಸ್ಥಳ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪತಿ ಸುರೇಶ್ ಗೌಡಗೆ ತಂದೆ ಊರು ಹಾವೇರಿಗೆ ಹೋಗಿ ಬರುವಾಗ ಗಾಂಜಾ ತಂದು ಮನೆಯಲ್ಲಿ ಎಳೆಯುವ ಅಭ್ಯಾಸ ಇದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ತಾಯಿ ಮಗಳ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.