Monday, April 29, 2024
Homeಕರಾವಳಿಕಡಬ: ಅಕ್ರಮ ಗೋ ಸಾಗಾಟ, ಕಸಾಯಿಖಾನೆ ತಡೆಗೆ ಹಿಂದೂ ಸಂಘಟನೆಗಳಿಂದ ಮನವಿ

ಕಡಬ: ಅಕ್ರಮ ಗೋ ಸಾಗಾಟ, ಕಸಾಯಿಖಾನೆ ತಡೆಗೆ ಹಿಂದೂ ಸಂಘಟನೆಗಳಿಂದ ಮನವಿ

spot_img
- Advertisement -
- Advertisement -

ಕಡಬ: ಇಲ್ಲಿನ ಕಡಬ ಠಾಣಾ ವ್ಯಾಪ್ತಿಯಲ್ಲಿ ಗೋ ಸಾಗಾಟ ಮತ್ತು ಕಸಾಯಿಖಾನೆಗಳು ತಲೆ ಎತ್ತುತ್ತಿದ್ದು, ಇದನ್ನು ಪತ್ತೆ ಹಚ್ಚಿ ತಡೆಯಬೇಕೆಂದು ಆಗ್ರಹಿಸಿ ಕಡಬ ಪ್ರಖಂಡ ವಿ.ಹಿಂ.ಪ. ಭಜರಂಗದಳ ವತಿಯಿಂದ ಜು.8ರಂದು ಕಡಬ ಎಸ್.ಐ. ಅವರಿಗೆ ಮನವಿ ನೀಡಲಾಗಿದೆ.


ಕಡಬ ಎಸ್.ಐ.ಆಂಜನೇಯ ರೆಡ್ಡಿ ಅವರಿಗೆ ಮನವಿ ನೀಡಿದ ಮುಖಂಡರು,ಮುಸ್ಲಿಂರ ಹಬ್ಬದ ಸಂದರ್ಭದಲ್ಲಿ ಅಲ್ಲಲ್ಲಿ ಗೋ ಸಾಗಾಟ ಮತ್ತು ಕಸಾಯಿಖಾನೆಗಳು ನಡೆಯುತ್ತದೆ. ಇದನ್ನು ತಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ವಿ.ಹಿಂ.ಪ ಕಡಬ ಪ್ರಖಂಡ ಅಧ್ಯಕ್ಷ ರಾಧಕೃಷ್ಣ ಕೋಲ್ಪೆ, ಉಪಾಧ್ಯಕ್ಷ ಸುರೇಶ್, ಎನ್. ಕೋಟೆಗುಡ್ಡೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳದಳ ಸಹ ಸಂಯೋಜಕ ಯತೀಶ್ ಹೊಸಮನೆ, ಸಾಮಾಜಿಕ ಕಾರ್ಯಕರ್ತ ಪ್ರಸಾದ್ ನೆಟ್ಟಣ, ಮರ್ದಾಳ ಬಜರಂಗದಳದ ಪ್ರಮುಖ್ ವಿನಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!