- Advertisement -
- Advertisement -
ಹರಿಯಾಣ : ಇಲ್ಲಿನ ಉದ್ಯಮಿಯೊಬ್ಬರು 11 ಲಕ್ಷ ಹಣದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದವೇಳೆ ಅಡ್ಡಗಟ್ಟಿದಂತ ದರೋಡೆಕೋರರ ಗುಂಪೊಂದು, 11 ಲಕ್ಷ ಹಣ ದೋಡಿಕೊಂಡು ಪರಾರಿಯಾಗಿದೆ. ಅಲ್ಲದೇ ಕಾರಿನಲ್ಲಿಯೇ ಕೂಡಿಹಾಕಿ, ಕಾರಿಗೆ ಬೆಂಕಿ ಹಚ್ಚಿ, ಸಜೀವವಾಗಿ ಸುಟ್ಟು ಹಾಕಿರುವ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.
ಹರಿಯಾಣದ ಹಿಸಾರ್ ಜಿಲ್ಲೆಯ ಹನ್ಸಿ ಪ್ರದೇಶ ಡಾಟಾ ಗ್ರಾಮದ ಉದ್ಯಮಿ ರಾಮ್ ಮೆಹರ್, ಕಾರಿನಲ್ಲಿ 11 ಲಕ್ಷ ಹಣದೊಂದಿಗೆ ತೆರಳುತ್ತಿದ್ದರು. ಇದರ ಬಗ್ಗೆ ಮಾಹಿತಿ ಹೊಂದಿದ್ದಂತ ದರೋಡೆಕೋರರು, ಉದ್ಯಮಿಯ ಕಾರನ್ನು ಹಿಂಬಾಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗಾಗಿ ಬಲೆ ಬೀಸಿದ್ದಾರೆ.
- Advertisement -