Saturday, June 28, 2025
Homeತಾಜಾ ಸುದ್ದಿಹಲ್ಲೆ ನಡೆಸಲು ಮುಂದಾದ ರೌಡಿಯೊಬ್ಬನಿಗೆ ಪೊಲೀಸರಿಂದ ಗುಂಡೇಟು

ಹಲ್ಲೆ ನಡೆಸಲು ಮುಂದಾದ ರೌಡಿಯೊಬ್ಬನಿಗೆ ಪೊಲೀಸರಿಂದ ಗುಂಡೇಟು

spot_img
- Advertisement -
- Advertisement -

ಶಿವಮೊಗ್ಗ :  ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ರೌಡಿಯೊಬ್ಬನ ಕಾಲಿಗೆ ಪೊಲೀಸರು ಗುಂಡುಹಾರಿಸಿ ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇಂದು ಮುಂಜಾನೆ 8.30 ರಿಂದ 9 ಗಂಟೆ ಸಮಯದಲ್ಲಿ ಆರೋಪಿ ಅರ್ಷದ್ ಖಾನ್ ಎನ್ನುವ ವ್ಯಕ್ತಿಯೂ  ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ತುಂಗಾನಗರ ಠಾಣೆಯ ಇನ್ಸ್​ಪೆಕ್ಟರ್​ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಈ ಘಟನೆಯು ಶಿವಮೊಗ್ಗ ಹೊರವಲಯವಾದ ಅನುಪಿನಕಟ್ಟೆ ಬಳಿಯಲ್ಲಿ ನಡೆದಿದ್ದು, ಪೊಲೀಸರ ಗುಂಡೇಟಿಗೆ ಒಳಗಾದ ಆರೋಪಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!