- Advertisement -
- Advertisement -
ಬೆಂಗಳೂರು: ಕಂದಾಯ ಇಲಾಖೆ ರಾಜ್ಯದಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ಬೆಲೆಯಲ್ಲಿ ಘೋಷಣೆ ಮಾಡಿದ್ದ ರಿಯಾಯಿತಿಯನ್ನು ಮುಂದುವರಿಸಿದೆ.

ಈ ಹಿಂದೆ 10% ರಿಯಾಯಿತಿ ಯನ್ನು ಜನವರಿ ಒಂದರಿಂದ ಮಾರ್ಚ್ 31ರವರೆಗೆ ಘೋಷಣೆ ಮಾಡಲಾಗಿತ್ತು. ಜನರ ಅಪೇಕ್ಷೆ ಮೇರೆಗೆ ಈ ರಿಯಾಯಿತಿಯನ್ನು ಮತ್ತೆ ಏಪ್ರಿಲ್ 25 ರಿಂದ ಜುಲೈ 24ವರೆಗೆ ಮುಂದುವರಿಸಲಾಗಿದೆ.
ರಿಯಾಯಿತಿ ದರ ಮುಂದುವರಿಕೆ ಮಾಡಿರುವ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಈ ರಿಯಾಯಿತಿ ದರ ರಾಜ್ಯದಾದ್ಯಂತ ಎಲ್ಲಾ ಸ್ವತ್ತುಗಳ ಖರೀದಿ ಮತ್ತು ಮಾರಾಟಕ್ಕೆ ಅನ್ವಯಿಸಲಿದೆ.
- Advertisement -