Sunday, May 5, 2024
Homeಕರಾವಳಿಹೃದಯ ವೈಶಾಲ್ಯತೆ ಮೆರೆದ ಮಂಗಳೂರು ಪೊಲೀಸ್ ಕಮೀಷನರ್ ; ಅಪಘಾತದಲ್ಲಿ ಮೃತಪಟ್ಟ ಎಸ್ಪಿ ಮಗಳನ್ನು ತನ್ನ...

ಹೃದಯ ವೈಶಾಲ್ಯತೆ ಮೆರೆದ ಮಂಗಳೂರು ಪೊಲೀಸ್ ಕಮೀಷನರ್ ; ಅಪಘಾತದಲ್ಲಿ ಮೃತಪಟ್ಟ ಎಸ್ಪಿ ಮಗಳನ್ನು ತನ್ನ ಕುರ್ಚಿಯಲ್ಲಿ ಕೂರಿಸಿ ಗೌರವಿಸಿದ ಪೊಲೀಸ್ ಆಯುಕ್ತ

spot_img
- Advertisement -
- Advertisement -

ಮಂಗಳೂರು; ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಮಗಳನ್ನು ತನ್ನ ಕುರ್ಚಿಯಲ್ಲಿ ಕೂರಿಸಿ ಗೌರವಿಸುವ ಮೂಲಕ ಕಮಿಷನರ್‌ ಶಶಿಕುಮಾರ್ ಹೃದಯ ವೈಶ್ಯಾಲತೆ ಮೆರೆದಿದ್ದಾರೆ.

2016-17ರ ವೇಳೆಯಲ್ಲಿ ಮಂಗಳೂರಿನಲ್ಲಿ ರವಿಕುಮಾರ್ ಎಂಬವರು ಎಎಸ್ಪಿಯಾಗಿದ್ದರು. ಮಂಗಳೂರು ಎಎಸ್ಪಿ ಆಗಿದ್ದ ರವಿ ಕುಮಾರ್ 2017ರಲ್ಲಿ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಸಾಗುವ ವೇಳೆ ಅವರ ಕಾರು ಅಪಘಾತವಾಗಿ ಮೃತಪಟ್ಟಿದ್ದರು.

2008ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ರವಿ ಕುಮಾರ್ ಅವರಿಗೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೃತಪಟ್ಟಿದ್ದರು.ಅವರಿಗೆ ಒಂದು ಹೆಣ್ಣು‌‌ ಮಗುವಿತ್ತು. ನಿನ್ನೆ  ರವಿ ಕುಮಾರ್ ಅವರ ಪತ್ನಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದರು.ಈ ವೇಳೆ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ತಮ್ಮ ಸೀಟ್ ಮೇಲೆ ಕೂರಿಸಿ ಅಗಲಿದ ರವಿ ಕುಮಾರ್ ಅವರಿಗೆ ಕಮಿಷನರ್ ಶಶಿಕುಮಾರ್ ಗೌರವ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!