ಬೆಳ್ತಂಗಡಿ : ಭಾನುವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಅಜ್ಜಿ ಬೆಳ್ತಂಗಡಿ 112 ಪೊಲೀಸರ ಸಹಾಯದಿಂದ ಸೋಮವಾರ ರಾತ್ರಿ ಮರಳಿ ಮನೆ ಸೇರಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಗುಡ್ಡೆಯ ಹಳೆಕಟ್ಟೆ ನಿವಾಸಿಯಾಗಿರುವ ಸಾವಿತ್ರಿ ಭಟ್ (82) ನಾಪತ್ತೆಯಾಗಿದ್ದ ವೃದ್ಧೆ.
ಇವರಿಗೆ ಮೂವರು ಮಕ್ಕಳು. ಸತೀಶ್ ಭಟ್,ರಮೇಶ್ ಭಟ್ ಹಾಗೂ ಮಗಳಾದ ವಿಜಯ ಭಟ್. ಸಾವಿತ್ರಿ ಸತೀಶ್ ಜೊತೆ ಹಳೆಕಟ್ಟೆಯಲ್ಲಿ ವಾಸವಾಗಿದ್ರು. ಭಾನುವಾರ ಏಕಾಏಕಿ ತಾಯಿ ಸಾವಿತ್ರಿ ಮನೆಯಿಂದ ನಾಪತ್ತೆಯಾಗಿದ್ದರು. ಆದ್ರೆ ಮನೆಯವರು ಇದ್ರ ಬಗ್ಗೆ ತಲೆಕೆಡಿಸಿಕೊಂಡಿರಲ್ಲಿಲ್ಲ.
ಸೋಮವಾರ ಸಂಜೆ ಸುಮಾರು 7:30 ರ ವೇಳೆಗೆ ಉಜಿರೆಯ ಅತ್ತಾಜೆ ನಿವಾಸಿ ವಿಜಯ್ ಎಂಬುವರು ಲಾಯಿಲ ಬ್ರಿಡ್ಜ್ ಬಳಿ ಅಜ್ಜಿ ಮಳೆಯಲ್ಲಿ ರಸ್ತೆಯಲ್ಲಿ ಇರುವುದನ್ನು ಕಂಡಿದ್ದಾರೆ. ಇವರನ್ನು ವಿಚಾರಿಸಿದಾಗ ಸರಿಯಾಗಿ ಉತ್ತರ ಸಿಗಲ್ಲಿಲ್ಲ. ಕೊನೆಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ರು. ನಂತರ ಪೊಲೀಸರ ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದರು. ನಂತರ ಬೆಳ್ತಂಗಡಿ ಹೆಡ್ ಕಾನ್ಟೇಬಲ್ ಸುಂದರ್ ಶೆಟ್ಟಿ ಮತ್ತು ಚಾಲಕ ಶಿವರಾಜ್ ಸ್ಥಳಕ್ಕೆ ಧಾವಿಸಿದ್ದು ಅಜ್ಜಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದ್ರು.
ಹೆಡ್ ಕಾನ್ ಸ್ಟೇಬಲ್ ಸುಂದರ್ ಶೆಟ್ಟಿ ಅಜ್ಜಿಯ ಬಳಿ ಇದ್ದ ಪ್ಲಾಸ್ಟಿಕ್ ಬ್ಯಾಗ್ ತೆಗೆದು ಪರಿಶೀಲನೆ ನಡೆಸಿದಾಗ ಸತೀಶ್ ಎಂಬುವರ ನೆಲ್ಲಿಗುಡ್ಡೆ ಮುರ್ತೆದಾರರ ಸಂಘದ ಪಾಸ್ ಬುಕ್ ಇತ್ತು. ಇದನ್ನು ಇಂಟರ್ ನೆಟ್ ಮೂಲಕ ಪರಿಶೀಲನೆ ನಡೆಸಿದಾಗ ಕಾರ್ಕಳ ಬಳಿ ಎಂದು ಗೊತ್ತಾಗಿದೆ. ನಂತರ ಕಾರ್ಕಳ ಗ್ರಾಮಾಂತರ ಪೊಲೀಸರ ಬಳಿ ಮಾಹಿತಿ ಹಂಚಿಕೊಂಡು ವಿಳಾಸ ಪತ್ತೆಗೆ ವಿನಂತಿಸಿದ್ದರು. ನಂತರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಗಳು ವಿಜಯ ಮತ್ತು ಅವರ ಗಂಡ ಬಂದು ಅಜ್ಜಿಯನ್ನು ಮನೆಗೆ ಮರಳಿ ಕರೆದುಕೊಂಡು ಹೋಗಿದ್ದಾರೆ . ಇನ್ನೂ ಅಜ್ಜಿ ಕಾರ್ಕಳದಿಂದ ಬೆಳ್ತಂಗಡಿಗೆ ಹೇಗೆ ಬಂದರು ಎಂದು ತಿಳಿದುಬಂದಿಲ್ಲ.
ಅಜ್ಜಿಯ ಪತ್ತೆಗೆ ಸಹಕರಿಸಿದ ವಿಜಯ ಅತ್ತಾಜೆ , ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನಸ್ಟೇಬಲ್ ಸುಂದರ್ ಶೆಟ್ಟಿ ಮತ್ತು 112 ವಾಹನ ಚಾಲಕ ಶಿವರಾಜ್ ಅವರ ಸಹಾಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.