- Advertisement -
- Advertisement -
ಉಡುಪಿ; ಮನೆಯೊಂದಕ್ಕೆ ನುಗ್ಗಿನ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಸಿದ್ದಾಪುರ ಗ್ರಾಮದ ಹೆನ್ನಾಬೈಲ್ಲು ಫಾರೆಸ್ಟ್ ವಸತಿ ಗೃಹದ ಬಳಿ ಜೂ.19ರಂದು ನಡೆದಿದೆ.
ಕೌಸರ ಭಾನು ಎಂಬವರ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ ಸುಮಾರು 8,00,000 ರೂ. ಮೌಲ್ಯದ 25 ಪವನ್ ತೂಕದ ಚಿನ್ನಾಭರಣ, 15,000ರೂ. ಮೌಲ್ಯದ ಮಗುವಿನ ಬೆಳ್ಳಿಯ ಆಭರಣ ಹಾಗೂ 53,000ರೂ. ನಗದು ಕಳವು ಮಾಡಿ ಕೊಂಡು ಹೋಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -