Sunday, June 29, 2025
Homeಕರಾವಳಿಬಂಟ್ವಾಳದಲ್ಲಿ ಕಳ್ಳರ ಕೈಚಳಕ; ಮನೆಗೆ ಬಾಗಿಲು ಹಾಕಿ ತೋಟಕ್ಕೆ ಹೋಗಿದ್ದಾಗ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳದಲ್ಲಿ ಕಳ್ಳರ ಕೈಚಳಕ; ಮನೆಗೆ ಬಾಗಿಲು ಹಾಕಿ ತೋಟಕ್ಕೆ ಹೋಗಿದ್ದಾಗ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

spot_img
- Advertisement -
- Advertisement -

ಬಂಟ್ವಾಳದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆ ಮಂದಿ ಮನೆಗೆ ಬಾಗಿಲು ಹಾಕಿ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾಗ  ಮನೆಯ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ . ಈ ಬಗ್ಗೆ ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌‌ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಬೀಜದಡಿ ನಿವಾಸಿ ಗುಣವತಿ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

ಜೂನ್ 15 ರಂದು ಗುಣವತಿ ಅವರು ಬೆಳಿಗ್ಗೆ 8.30 ರ ವೇಳೆಗೆ ಮನೆಯ ಹಿಂಬಾಗಿಲನ್ನು ಮುಚ್ಚಿ ಎದುರು ಬಾಗಿಲಿಗೆ ಬೀಗ ಹಾಕಿ ತೋಟದ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ 1.30 ಗಂಟೆಗೆ ಕೆಲಸ ಮುಗಿಸಿ ಊಟಕ್ಕೆ ಮನೆಗೆ ಬಂದಾಗ ಹಿಂಬಾಗಿಲು ತೆರದಿರುವುದು ಕಂಡು ಬಂದಿದೆ.

ಎದುರು ಬಾಗಿಲಿನ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿ ಕಪಾಟಿನ ಬಾಗಿಲು ತೆರೆದುಕೊಂಡಿತ್ತು.ನೆಲದ ಮೇಲೆ ಬಟ್ಟೆಗಳು ಚೆಲ್ಲಿಪಿಲ್ಲಿಯಾಗಿತ್ತು.

‌ಗೋದ್ರೆಜ್ ನ ಸೇಪ್ ಲಾಕರ್ ತೆರೆದುಕೊಂಡಿದ್ದು, ಅದರೊಳಗೆ ಇರಿಸಲಾಗಿದ್ದ ಸುಮಾರು ನಾಲ್ಕುವರೆ ಪವನ್ ತೂಕದ ಕರಿಮಣಿ ಸರ, ಒಂದುವರೆ ಪವನ್ ತೂಕದ ಬೆಂಡೋಲೆ, ಅರ್ಧ ಪವನ್ ತೂಕದ ಪವನ್ ತೂಕದ ಬೆಂಡೋಲೆ , ಸುಮಾರು 3 ಗ್ರಾಂ ತೂಕದ ಗಣಪತಿ ಪದಕ, ಹಾಗೂ ಮೂಗುತಿ ಸೇರಿದಂತೆ ಒಟ್ಟು 53 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!