- Advertisement -
- Advertisement -
ಮಂಗಳೂರು: ನವರಾತ್ರಿ ಪ್ರಯುಕ್ತ ಮಂಗಳೂರಿನ ಶಾರದೆಗೆ ತೊಡಿಸಲು ವಾರಾಣಸಿಯ ಮುಸ್ಲಿಂ ತಂಡ ಸೀರೆಯೊಂದನ್ನು ಸಿದ್ಧಪಡಿಸಿದ್ದು ಗಮನ ಸೆಳೆಯುತ್ತಿದೆ.
ಮಂಗಳೂರಿನ ಈ ಶಾರದೆಗೆ ಮಂಗಳೂರಿನ ಕುಲ್ಯಾಡಿಕರ್ ನೂತನ್ ಸಿಲ್ಕ್ ಮಾಲೀಕ ಸುಧೀರ್ ಪೈ ಪ್ರತಿ ವರ್ಷ ಸೀರೆಯನ್ನು ಕೊಡುಗೆಯಾಗಿ ನೀಡುತ್ತಾರೆ. ಆದ್ರೆ ಈ ವರ್ಷ ನೀಡುವ ಸೀರೆ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ.
ಈ ಬಾರಿ ನೀಡಲಾಗುವ ಸೀರೆಯನ್ನು ಬಂಗಾರದ ಲೇಪನದೊಂದಿಗೆ ಮಾಡಲಾಗಿದೆ. ಕಡುಹಸಿರು ಬಣ್ಣದ ಈ ಬನಾರಸ್ ಸೀರೆಗೆ ಬಂಗಾರದಿಂದ ಡಿಸೈನ್ ಮಾಡಲಾಗಿದೆ. ಸೀರೆಯ ಮೇಲೆ ಸುಮಾರು 2600 ಹೂವುಗಳ ಚಿತ್ರವನ್ನು ಬಂಗಾರದಿಂದ ಮಾಡಲಾಗಿದೆ. ಈ ಬನಾರಸ್ ಸೀರೆಯನ್ನು ವಾರಾಣಸಿಯ ನುರಿತ ಸೀರೆ ತಯಾರಿಕರಿಂದ ಮಾಡಲಾಗಿದೆ. ವಾರಾಣಸಿಯ ನೂರುಲ್ಲಾ ಅಮೀನ್ ಎಂಬುವರು ಈ ಸೀರೆಯನ್ನು ತಯಾರಿಸಿದ್ದಾರೆ. ಈ ಸೀರೆಗೆ ನೂರಲ್ಲ ಅಮೀನ್ ಅವರ ನಾಲ್ಕು ಜನರ ತಂಡ ಕೆಲಸ ಮಾಡಿದೆ.
- Advertisement -